ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಪ್ರಾಣ ಪ್ರತಿಷ್ಠೆ ಧಾರ್ಮಿಕ ವಿಧಿ ವಿಧಾನಗಳ ನೇರ ಪ್ರಸಾರವನ್ನು ಬೃಹತ್ ಪರದೆ ಮೂಲಕ ಪ್ರದರ್ಶಿಸಲಾಯಿತು
ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಅಂಗವಾಗಿ ನೂರಾರು ಮಹಿಳೆಯರು ಲಲಿತಾ ಸಹಸ್ರನಾಮ ವಿಷ್ಣು ಸಹಸ್ರನಾಮ ಪಠಿಸಿದರು
ಡಾ.ಎನ್.ಎಸ್.ಮೋಹನ್ ಸ್ನೇಹ ಬಳಗದ ವತಿಯಿಂದ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡಿದ್ದವರನ್ನು ಸನ್ಮಾನಿಸಲಾಯಿತು
ಚಾಮರಾಜನಗರ ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮದಲ್ಲಿ ಮುಖಂಡರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು. ಬಳಿಕ ಪ್ರತಿಷ್ಠಾಪನೆಯ ನೇರಪ್ರಸಾರ ವೀಕ್ಷಿಸಿದರು. ಅನ್ನಸಂತರ್ಪಣೆಯನ್ನೂ ನೆರವೇರಿಸಲಾಯಿತು
ಮನೆಗಳಲ್ಲೂ ಪೂಜೆ
ರಾಮಮಂದಿರ ಲೋಕಾರ್ಪಣೆ ಅಂಗವಾಗಿ ಹಿಂದೂಗಳ ಮನೆಗಳಲ್ಲಿ ಸೋಮವಾರ ರಾಮನ ಪೂಜೆ ನಡೆಯಿತು. ಮಹಿಳೆಯರು, ಪುರುಷರು ಮಕ್ಕಳು ರಾಮ ತಾರಕ ಮಂತ್ರ ಪಠಿಸಿದರು. ಕೆಲವರು ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿದ್ದರು. ಟಿವಿ, ಮೊಬೈಲ್ಗಳ ಮೂಲಕ ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ವೀಕ್ಷಿಸಿದರು. ರಾತ್ರಿ ಮನೆಗಳಲ್ಲಿ ದೀಪ ಹಚ್ಚಿ ರಾಮಸ್ಮರಣೆಯಲ್ಲಿ ತೊಡಗಿದರು.
ಚಾಮರಾಜನಗರದ ಸಂಜೀವಿನಿ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಶ್ರೀರಾಮ ಹಾಗೂ ರಾಮಮಂದಿರಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿ ಪ್ರದರ್ಶಿಸಿದರು