‘12 ಮಂದಿ ಯಜಮಾನರಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕುಟುಂಬದವರು, ಸಂಬಂಧಿಕರು, ಬೀದಿಯವರು ಮೃತಪಟ್ಟರೆ ಅವರ ಸಮಾಧಿಗೆ ಹೋಗುವುದಕ್ಕೂ ಅವಕಾಶ ನೀಡುತ್ತಿಲ್ಲ. ಬಹಿಷ್ಕಾರ ಹಾಕಿರುವ ಸಂಬಂಧ ಪೊಲೀಸರಿಗೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ದೂರು ನೀಡಲಾಗಿದೆ. ನಮ್ಮ ಕುಟುಂಬ ಮಾತ್ರ ಅಲ್ಲ. ನಿವೇಶನದ ವಿಚಾರವಾಗಿ ಪುಟ್ಟರಂಗಯ್ಯ, ನಂಜಯ್ಯ, ಮಹದೇವಯ್ಯ, ಪುಟ್ಟನಂಜಮ್ಮ, ಶಿವಣ್ಣ ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ’ ಎಂದು ರವಿ ಹಾಗೂ ಅವರ ತಮ್ಮ ಕಿರಣ್ ಅವರು ಹೇಳಿದರು.