ಮೈಸೂರಿನ ರಂಗಕರ್ಮಿ ಯೋಗಾನಂದ ಅರಸೀಕರೆ ಮಾತನಾಡಿ, ‘ಮಕ್ಕಳನ್ನು ಸುಮ್ಮನೆ ಕೂರಿಸಿದರೆ ಅವರನ್ನು ಕಟ್ಟಿ ಹಾಕಿದಂತಾಗುತ್ತದೆ. ಮಕ್ಕಳಿಗೆ ಕಲಿಕೆ ಎಂದರೆ ತರಗತಿ ಒಳಗೆ ಮಾತ್ರ ಅಲ್ಲ, ಮುಕ್ತ ವಾತಾವರಣವನ್ನು ಅವರಿಗೆ ಕಲ್ಪಿಸಬೇಕು ಮತ್ತು ಅವರಲ್ಲಿ ಓದುವ ಗೀಳನ್ನು ಬೆಳೆಸಬೇಕು. ತೆಗೆ ಪೋಷಕರೂ ಮಕ್ಕಳಿಗೆ ಹೆಚ್ಚು ಸಮಯ ಕೊಡಬೇಕು’ ಎಂದು ಸಲಹೆ ನೀಡಿದರು.