ಚಾಮರಾಜನಗರದಿಂದ ಬಂದಿದ್ದ ಖಾಲಿ ಟ್ಯಾಂಕರ್ಗಳಿಗೆ ಆಮ್ಲಜನಕ ತುಂಬಲು ಅವಶ್ಯವಿರುವ ಸಮಯಾವಕಾಶ, ಪ್ರಕ್ರಿಯೆಯ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಪರಿಪಾಲಿಸಬೇಕಾದ ಸಮಯಪಾಲನೆಯ ಕುರಿತಂತೆ ಸಂಬಂಧಿತರಿಗೆ ಮನವರಿಕೆ ಮಾಡಿಕೊಡುವುದು ನನ್ನ ಉದ್ದೇಶವಾಗಿತ್ತು. ರಾಜ್ಯ ಸರ್ಕಾರದ ಸಚಿವನಾಗಿ ನನ್ನ ಜವಾಬ್ದಾರಿಯ ಅರಿವು ನನಗಿದೆ. ಅವೈಜ್ಞಾನಿಕವಾಗಿ ಆಲೋಚಿಸುವ, ಆವೇಶದಿಂದ ಪ್ರತಿಕ್ರಿಯಿಸುವ ರಾಜಕಾರಣ ನನ್ನದಲ್ಲ ಎಂದು ಹೇಳಿದ್ದಾರೆ. ವಸ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರವು ಕೆಲಸ ಮಾಡುತ್ತಿದ್ದು ಬಹುಜನರ ಹಿತದ ಆಶಯವೇ ಸರ್ಕಾರದ ಮೊದಲ ಆದ್ಯತೆ ಆಗಿದೆ ಎಂದೂ ಸುರೇಶ್ ಕುಮಾರ್ ಹೇಳಿದ್ದಾರೆ.