‘ನವೆಂಬರ್ ಅಂತ್ಯದ ತನಕ ಎಳೆನೀರು ಒಂದಕ್ಕೆ ₹15 ರಿಂದ ₹20 ತನಕ ದರ ನಿಗದಿ ಪಡಿಸಲಾಗಿತ್ತು. ಕೊಳ್ಳುವವರು ಗಾತ್ರ ಮತ್ತು ಗುಣಮಟ್ಟದ ಆಧಾರದ ಮೇಲೆ ಮಾಲೀಕರಿಗೆ ಮುಂಗಡ ನೀಡಿ ವರ್ಷವಿಡೀ ಕಟಾವು ಮಾಡುತ್ತಿದ್ದರು. ಮದ್ದೂರು, ಮುಂಬೈ, ಹೈದರಾಬಾದ್ ನಗರಗಳಿಗೆ ಪ್ರತಿದಿನ 5 ಸಾವಿರಕ್ಕೂ ಹೆಚ್ಚಿನ ಎಳನೀರು ಪೂರೈಕೆಯಾಗುತ್ತಿತ್ತು. ಆದರೆ, ಈಗ ಧಾರಣೆ ಒಂದು ಎಳೆನೀರಿಗೆ ₹13 ರಿಂದ ₹14ಕ್ಕೆ ಕುಸಿದಿದೆ. ಬೇಡಿಕೆಯೂ ಇಲ್ಲ. ಇದರಿಂದ ರೈತರ ವರಮಾನ ಕುಸಿದಿದೆ’ ಎಂದು ವ್ಯಾಪಾರಿ ಯರಿಯೂರು ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.