‘ಬೇಸಿಗೆಯಲ್ಲಿ ಆಲೆಮನೆಗೆ ಬೇಡಿಕೆ ಹೆಚ್ಚು. ಬಿಸಿಲು ಹೆಚ್ಚಾಗಿ ಇರುವುದರಿಂದ ಕಬ್ಬಿನ ಸಿಪ್ಪೆ (ಇಂಧನ) ಬೇಗ ಒಣಗಿ, ಉತ್ಪಾದನೆಗೆ ನೆರವಾಗುತ್ತದೆ. ಮುಂಗಾರಿಗೂ ಮೊದಲು ಕಬ್ಬು ಕಟಾವು ಮಾಡಿ, ಹೊಲದ ನಿರ್ವಹಣೆಗೆ ಹೆಚ್ಚು ಸಮಯ ದೊರೆಯುತ್ತದೆ. ಹೀಗಾಗಿ, ಕಡಿಮೆ ಬೆಳವಣಿಗೆ ಹೊಂದಿದ ಕಬ್ಬನ್ನು ಕಡಿದು, ಬೆಲೆ ಏರಿದಾಗ ಮಾರಾಟ ಮಾಡಲಾಗುತ್ತದೆ. ಆದರೆ, ಈ ವಾರ ನಿರೀಕ್ಷಿಸಿದಷ್ಟು ಬೆಲೆ ಹೆಚ್ಚಾಗದ ಕಾರಣ ಕಬ್ಬು ಬೆಳೆಗಾರರು ನಷ್ಟ ಅನುಭವಿಸುವಂತೆ ಆಗಿದೆ’ ಎಂದು ರೈತ ಗೂಳಿಪುರ ಗ್ರಾಮದ ಅಂಗಡಿ ಮಹದೇವ ನಾಯಕ ಹೇಳಿದರು.