ಚಾಮರಾಜನಗರ: ತಾಲ್ಲೂಕಿನ ಉಡಿಗಾಲದ ಬಣ್ಣಾರಿ ಅಮ್ಮನ್ ದೇವಾಲಯದಲ್ಲಿ ಸೋಮವಾರ ರಾತ್ರಿ ಕಳ್ಳತನವಾಗಿದೆ.
ರಾತ್ರಿ 10ರಿಂದ 10.30ರ ನಡುವೆ ಗೋಲಕ ಮುರಿದು ಹಣ ದೋಚಿದ್ದಾರೆ. ಮೂವರ ತಂಡ ಈ ಕೃತ್ಯ ಎಸಗಿದೆ ಎಂದು ಸ್ಥಳೀಯರು ಶಂಕಿಸಿದ್ದು, ಇಬ್ಬರು ದೇವಾಲಯದ ಒಳಕ್ಕೆ ನುಗ್ಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.