ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿ ಕರಡಿಯನ್ನು ಬೇಟೆಯಾಡಿರುವ ಘಟನೆ ನಡೆದಿದ್ದು, ಸಫಾರಿಗೆ ತೆರಳಿದ ಪ್ರವಾಸಿರೊಬ್ಬರ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಕುರಿತು ಬಂಡೀಪುರ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿ, ಬಂಡೀಪುರ ಸಫಾರಿ ರಸ್ತೆ ಬಳಿಯ ಕೆರೆಯೊಂದರಲ್ಲಿ ಹುಲಿಯು ಕರಡಿಯನ್ನು ಬೇಟೆಯಾಡಿದೆ ಎಂದು ಖಚಿತ ಪಡಿಸಿದ್ದಾರೆ.
ಕರಡಿಯೂ ಬಲಿಷ್ಠ ಪ್ರಾಣಿಯಾಗಿದ್ದು, ಹಲವು ಸಂದರ್ಭಗಳಲ್ಲಿ ಹುಲಿಯನ್ನು ಎದುರಿಸಿ ಕಾಲ್ಕೀಳುವಂತೆ ಮಾಡಿದ ನಿದರ್ಶನಗಳಿವೆ.