ಬೆಳ್ಳಿ ಕವಚ ಆಕರ್ಷಣೆ: ದೇವಸ್ಥಾನ ಅಭಿವೃದ್ಧಿಯಾದ ನಂತರ ಮಹಾರಾಜರು ಪ್ರತಿವರ್ಷ ದೇವಸ್ಥಾನಕ್ಕೆ ಬಂದು ವೀರಭದ್ರಸ್ವಾಮಿಗೆ ಬೆಳ್ಳಿ ಕವಚ ಧಾರಣೆ ಮಾಡಿ ಜಾತ್ರೆ ಮಾಡಿಸುತ್ತಿದ್ದರು.ಮಹಾರಾಜರ ಕಾಲದಲ್ಲೇಬೆಳ್ಳಿ ಕವಚ ಸಿದ್ಧಗೊಂಡಿದೆ. ಪ್ರತಿವರ್ಷವೂ ಮಹಾರಾಜರು ಬಂದು ಬೆಳ್ಳಿ ಕವಚ ತೊಡಿಸುವ ಪದ್ಧತಿ ಜಯಚಾಮರಾಜೇಂದ್ರ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರವರೆಗೂ ಇತ್ತು.ಸ್ವಾತಂತ್ರ್ಯ ನಂತರ ಈ ಪದ್ಧತಿ ಮುಂದುವರಿಯಲಿಲ್ಲ. ಅಂದಿನ ಅರ್ಚಕರಿಗೆ ಗುರುವಿನ ಸ್ಥಾನ ನೀಡಲಾಗಿತ್ತು. ಅರ್ಚಕರು ಜಾತ್ರಾ ಸಂದರ್ಭದಲ್ಲಿ ಪೂಜೆ ಸಲ್ಲಿಸಿ, ಪ್ರಸಾದವನ್ನು ಮಹಾರಾಜರಿಗೆ ನೀಡುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.