ತಾಲ್ಲೂಕಿನ ಹೊನ್ನೂರು, ಯರಿಯೂರು, ಮದ್ದೂರು, ಮಾಂಬಳ್ಳಿ, ಯರಗಂಬಳ್ಳಿ, ಅಂಬಳೆ– 2 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಕಾಮಗಾರಿ ನವೆಂಬರ್ನಲ್ಲಿ ಆರಂಭಿಸಲಾಗಿತ್ತು. ಹೊನ್ನೂರು, ಮಾಂಬಳ್ಳಿ, ಕೆಸ್ತೂರು, ಮದ್ದೂರು ಗ್ರಾಮಗಳಲ್ಲಿ ಉದ್ಘಾಟನೆಯನ್ನೂ ಮಾಡಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಅವು ಕೆಟ್ಟು ಹೋದವು. ಮತ್ತೆ ದುರಸ್ತಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಯರಿಯೂರು ಜಯಣ್ಣ, ರಾಮಾಪುರ ರಂಗಸ್ವಾಮಿ ಆರೋಪಿಸುತ್ತಾರೆ.