ಯಳಂದೂರು: ಪ್ರತಿಯೊಬ್ಬರೂ ಶುದ್ಧ ನೀರು ಬಳಸಿ, ಆರೋಗ್ಯವನ್ನು ಸುಸ್ಥಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಉಪ್ಪಿನಮೋಳೆ ಗ್ರಾಮದಲ್ಲಿ ಶನಿವಾರ ₹12.50 ಲಕ್ಷ ವೆಚ್ಚದ ಶುದ್ಧ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆನೀಡಿ ಅವರು ಮಾತನಾಡಿದರು. ಪಂಚಾಯಿತಿ ಘಟಕದ ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ವಹಣೆ ಮಾಡಿದರೆ ಶುದ್ಧ ನೀರು ಪೂರೈಕೆಯಾಗುತ್ತದೆ ಎಂದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಮೀನಾ, ಸದಸ್ಯರಾದ ಪುಟ್ಟಮಾದೇವ್, ಕೆ.ಮಾದೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಮುಖಂಡರಾದ ರಂಗಸ್ವಾಮಿ, ಬಲ್ಲಶೆಟ್ಟಿ, ಮಹದೇವಶೆಟ್ಟಿ, ಪುಟ್ಟಸ್ವಾಮಿ, ಗೋವಿಂದಶೆಟ್ಟಿ, ರಂಗಸ್ವಾಮಿ, ರಾಜಣ್ಣ ಇದ್ದರು.