<p><strong>ಯಳಂದೂರು:</strong> ‘ಮಘಾ ಮಳೆ ಬಂದಷ್ಟು ಒಳ್ಳೇದು, ಮನೆ ಮಗ ಉಂಡಷ್ಟು ಒಳಿತು’ ಎಂಬ ಗಾದೆ ಮಾತು ಗ್ರಾಮೀಣರಲ್ಲಿ ಇದೆ. ಇದನ್ನು ನೆನಪಿಸುವಂತೆ ಭಾನುವಾರ ಪಟ್ಟಣ, ಬಿಳಿಗಿರಿಬೆಟ್ಟ, ಸುತ್ತಲಿನ ಪ್ರದೇಶಗಳಲ್ಲಿ ಭರ್ಜರಿ ಮಳೆ ಸುರಿಯಿತು.</p>.<p>ತಾಲ್ಲೂಕಿನಲ್ಲಿ ಮುಂಜಾನೆ ಮೋಡ ಮುಸುಕಿದ ವಾತಾವರಣ ಇತ್ತು. ಇದೇ ವೇಳೆ ಹೆಚ್ಚಿನ ಧಗೆಯೂ ಬಾಧಿಸಿತ್ತು. ತುಂತುರು ಮಳೆ ಸುರಿಯಿತು. ಮಧ್ಯಾಹ್ನ ನಿರೀಕ್ಷೆಗೂ ಮೀರಿ ಬಿರುಸಿನ ಮಳೆ ಸುರಿದಿದೆ.</p>.<p>ಬಿಳಿಗಿರಿರಂಗಬೆಟ್ಟದಲ್ಲಿ ಎರಡೂವರೆ ತಾಸು ವರ್ಷಧಾರೆ ಆಯಿತು. ಸೆಖೆಯಿಂದ ತತ್ತರಿಸಿದ್ದ ನಿವಾಸಿಗಳು ನಿಟ್ಟುಸಿರು ಬಿಟ್ಟರು. ಪ್ರವಾಸಿಗಳು ಮತ್ತು ಭಕ್ತರು ಒದ್ದೆಯಾಗದಂತೆ ದೇವಸ್ಥಾನದ ಸುತ್ತ ನಿಂತುಕೊಂಡರು. ತಡರಾತ್ರಿಯೂ ಸುರಿದಿತ್ತು. ಕೆರೆ ಕಟ್ಟೆಗಳಿಗೆ ನೀರು ಹರಿದು ಬರುವ ನಿರೀಕ್ಷೆ ಇದೆ ಎಂದು ಬಂಗ್ಲೇಪೋಡು ಬೊಮ್ಮಯ್ಯ ಹೇಳಿದರು.</p>.<p> <strong>ಸಂತೆಯಲ್ಲಿ ಪರದಾಟ:</strong> </p><p>ಪಟ್ಟಣದ ತಗ್ಗು ಪ್ರದೇಶದಲ್ಲಿ ನೀರು ನಿಂತು ಸಂಚರಿಸಲು ನಿವಾಸಿಗಳು ತ್ರಾಸಪಟ್ಟರು. ಯರಗಂಬಳ್ಳಿ-ಗುಂಬಳ್ಳಿ ಗ್ರಾಮಗಳ ರಸ್ತೆ ಹದಗೆಟ್ಟಿದ್ದು, ಸವಾರರು ತಗ್ಗು ರಸ್ತೆ ನಡುವೆ ಸಾಗಿದರು. ಭಾನುವಾರದ ಸಂತೆ ಮಳೆಗೆ ಸಿಲುಕಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರು ಪರದಾಡಿದರು.</p>.<p>ಮಾರಾಟಗಾರರು ತರಕಾರಿ, ಸೊಪ್ಪು ಮತ್ತಿತರ ವಸ್ತುಗಳನ್ನು ರಕ್ಷಿಸಿಕೊಳ್ಳಲು ಟೆಂಟ್ಗಳ ಮೊರೆ ಹೋದರು. ಮಳೆ ನಡುವೆ ಗ್ರಾಹಕರು ವಸ್ತುಗಳನ್ನು ಕೊಂಡರು. ಸಂತೆ ವ್ಯಾಪಾರಿಗಳು ಬಿಸಿಲು ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲು ಶಾಶ್ವತ ಸೂರು ಮಾಡಿಕೊಡಬೇಕು ಎಂದು ವ್ಯಾಪಾರಿ ಮಹದೇವ ಒತ್ತಾಯಿಸಿದರು.</p>.<p>ಕೆಲವು ದಿನಗಳಿಂದ ಉಷ್ಣಾಂದಲ್ಲಿ ಏರಿಕೆಯಾಗಿದೆ. ಹಾಗಾಗ, ಸೋನೆ ಮಳೆ ಸುರಿದರೂ, ಶಾಖ ತಣಿದಿಲ್ಲ. ಬಿಸಿಲು, ಮೋಡದ ನಡುವೆ ದಗೆಯೂ ಹೆಚ್ಚಾಗುತ್ತಿದೆ. ಮಳೆ ಸುರಿಯುತ್ತಿದ್ದರೂ ಫ್ಯಾನ್ ಬಳಸಿ ಮಲಗುವ ಪರಿಸ್ಥಿತಿ ಇದೆ. ಕೂಲಿ ಕೆಲಸಗಾರರು ಪರಿತಪಿಸುವಂತೆ ಆಗಿದೆ ಎಂದು ಮಾಂಬಳ್ಳಿ ಶಾಂತಮೂರ್ತಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ‘ಮಘಾ ಮಳೆ ಬಂದಷ್ಟು ಒಳ್ಳೇದು, ಮನೆ ಮಗ ಉಂಡಷ್ಟು ಒಳಿತು’ ಎಂಬ ಗಾದೆ ಮಾತು ಗ್ರಾಮೀಣರಲ್ಲಿ ಇದೆ. ಇದನ್ನು ನೆನಪಿಸುವಂತೆ ಭಾನುವಾರ ಪಟ್ಟಣ, ಬಿಳಿಗಿರಿಬೆಟ್ಟ, ಸುತ್ತಲಿನ ಪ್ರದೇಶಗಳಲ್ಲಿ ಭರ್ಜರಿ ಮಳೆ ಸುರಿಯಿತು.</p>.<p>ತಾಲ್ಲೂಕಿನಲ್ಲಿ ಮುಂಜಾನೆ ಮೋಡ ಮುಸುಕಿದ ವಾತಾವರಣ ಇತ್ತು. ಇದೇ ವೇಳೆ ಹೆಚ್ಚಿನ ಧಗೆಯೂ ಬಾಧಿಸಿತ್ತು. ತುಂತುರು ಮಳೆ ಸುರಿಯಿತು. ಮಧ್ಯಾಹ್ನ ನಿರೀಕ್ಷೆಗೂ ಮೀರಿ ಬಿರುಸಿನ ಮಳೆ ಸುರಿದಿದೆ.</p>.<p>ಬಿಳಿಗಿರಿರಂಗಬೆಟ್ಟದಲ್ಲಿ ಎರಡೂವರೆ ತಾಸು ವರ್ಷಧಾರೆ ಆಯಿತು. ಸೆಖೆಯಿಂದ ತತ್ತರಿಸಿದ್ದ ನಿವಾಸಿಗಳು ನಿಟ್ಟುಸಿರು ಬಿಟ್ಟರು. ಪ್ರವಾಸಿಗಳು ಮತ್ತು ಭಕ್ತರು ಒದ್ದೆಯಾಗದಂತೆ ದೇವಸ್ಥಾನದ ಸುತ್ತ ನಿಂತುಕೊಂಡರು. ತಡರಾತ್ರಿಯೂ ಸುರಿದಿತ್ತು. ಕೆರೆ ಕಟ್ಟೆಗಳಿಗೆ ನೀರು ಹರಿದು ಬರುವ ನಿರೀಕ್ಷೆ ಇದೆ ಎಂದು ಬಂಗ್ಲೇಪೋಡು ಬೊಮ್ಮಯ್ಯ ಹೇಳಿದರು.</p>.<p> <strong>ಸಂತೆಯಲ್ಲಿ ಪರದಾಟ:</strong> </p><p>ಪಟ್ಟಣದ ತಗ್ಗು ಪ್ರದೇಶದಲ್ಲಿ ನೀರು ನಿಂತು ಸಂಚರಿಸಲು ನಿವಾಸಿಗಳು ತ್ರಾಸಪಟ್ಟರು. ಯರಗಂಬಳ್ಳಿ-ಗುಂಬಳ್ಳಿ ಗ್ರಾಮಗಳ ರಸ್ತೆ ಹದಗೆಟ್ಟಿದ್ದು, ಸವಾರರು ತಗ್ಗು ರಸ್ತೆ ನಡುವೆ ಸಾಗಿದರು. ಭಾನುವಾರದ ಸಂತೆ ಮಳೆಗೆ ಸಿಲುಕಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರು ಪರದಾಡಿದರು.</p>.<p>ಮಾರಾಟಗಾರರು ತರಕಾರಿ, ಸೊಪ್ಪು ಮತ್ತಿತರ ವಸ್ತುಗಳನ್ನು ರಕ್ಷಿಸಿಕೊಳ್ಳಲು ಟೆಂಟ್ಗಳ ಮೊರೆ ಹೋದರು. ಮಳೆ ನಡುವೆ ಗ್ರಾಹಕರು ವಸ್ತುಗಳನ್ನು ಕೊಂಡರು. ಸಂತೆ ವ್ಯಾಪಾರಿಗಳು ಬಿಸಿಲು ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲು ಶಾಶ್ವತ ಸೂರು ಮಾಡಿಕೊಡಬೇಕು ಎಂದು ವ್ಯಾಪಾರಿ ಮಹದೇವ ಒತ್ತಾಯಿಸಿದರು.</p>.<p>ಕೆಲವು ದಿನಗಳಿಂದ ಉಷ್ಣಾಂದಲ್ಲಿ ಏರಿಕೆಯಾಗಿದೆ. ಹಾಗಾಗ, ಸೋನೆ ಮಳೆ ಸುರಿದರೂ, ಶಾಖ ತಣಿದಿಲ್ಲ. ಬಿಸಿಲು, ಮೋಡದ ನಡುವೆ ದಗೆಯೂ ಹೆಚ್ಚಾಗುತ್ತಿದೆ. ಮಳೆ ಸುರಿಯುತ್ತಿದ್ದರೂ ಫ್ಯಾನ್ ಬಳಸಿ ಮಲಗುವ ಪರಿಸ್ಥಿತಿ ಇದೆ. ಕೂಲಿ ಕೆಲಸಗಾರರು ಪರಿತಪಿಸುವಂತೆ ಆಗಿದೆ ಎಂದು ಮಾಂಬಳ್ಳಿ ಶಾಂತಮೂರ್ತಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>