<p><strong>ಚಾಮರಾಜನಗರ: </strong>`ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 2004ರಲ್ಲಿ ನಡೆದ ಚುನಾವಣೆಯು ಐತಿಹಾಸಿಕ ಫಲಿತಾಂಶ ನೀಡಿತು. ಅದರ ಫಲವಾಗಿ ಕಳೆದ ಹತ್ತು ವರ್ಷದಿಂದ ರಾಜಕೀಯ ವನವಾಸ ಅನುಭವಿಸುತ್ತಿದ್ದೇನೆ. ಈ ವನವಾಸಕ್ಕೆ ಮತದಾರರು ಮುಕ್ತಿ ನೀಡಬೇಕು' ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಕೋರಿದರು.<br /> <br /> ನಗರದ ಗುರುನಂಜಶೆಟ್ಟಿ ಛತ್ರದ ಮುಂಭಾಗ ಬುಧವಾರ ನಡೆದ ಬಿಜೆಪಿಯ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.<br /> ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ನನ್ನ ರಾಜಕೀಯ ಭವಿಷ್ಯ ಅಡಗಿದೆ. ದಿ.ಬಿ. ರಾಚಯ್ಯ ಅವರು ರೈತ ಕುಟುಂಬಗಳಿಗೆ ನೆರವಾಗಿದ್ದರು. ಜನಸೇವೆಯಲ್ಲಿ ತೊಡಗಿದ್ದರು. ಅವರ ಮಗನಾದ ನಾನು ಶಾಸಕನಾಗಿದ್ದ ವೇಳೆ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸ್ದ್ದಿದೇನೆ. ನನ್ನ ಮೇಲೆ ಕರುಣೆ ತೋರಬೇಕು ಎಂದರು.<br /> <br /> ಬಿಜೆಪಿ ರಾಜ್ಯ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿದ್ದ ಕಾಮಗಾರಿಗಳಿಗೆ ಈಗಿನ ಕಾಂಗ್ರೆಸ್ ಜನಪ್ರತಿನಿಧಿಗಳು ಉದ್ಘಾಟನೆ ನೆರವೇರಿಸುತ್ತಿದ್ದಾರೆ. ಬೆಂಗಳೂರು-ಚಾಮರಾಜನಗರ ರೈಲು ಮಾರ್ಗ ನಿರ್ಮಾಣದ ವಿಚಾರದಲ್ಲಿ ಧ್ರುವನಾರಾಯಣ ಕೇವಲ ರೈಲು ಬಿಡುತ್ತಿದ್ದಾರೆ ಎಂದು ಟೀಕಿಸಿದರು.<br /> ಕೇಂದ್ರದ ಯುಪಿಎ ಸರ್ಕಾರ ಹಗರಣಗಳ ಗೂಡಾಗಿದೆ. ಈ ಎಲ್ಲ ಕಾರಣಗಳಿಂದ ಜನರು ಬದಲಾವಣೆ ಬಯಸಿದ್ದಾರೆ ಎಂದ ಅವರು, ನನಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಬೇಕು ಎಂದರು.<br /> <br /> ಮಾಜಿ ಸಚಿವ ವಿ. ಸೋಮಣ್ಣ ಮಾತನಾಡಿ, `ಹಣದುಬ್ಬರ, ರಾಜಕೀಯ ಅರಾಜಕತೆ, ಗಡಿಯಲ್ಲಿ ಭಾರತೀಯ ಸೈನಿಕರ ಸಾವಿನ ಘಟನೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕೇಂದ್ರದ ಯುಪಿಎ ಸರ್ಕಾರ ವಿಫಲವಾಗಿದೆ. ದೇಶದ ರಕ್ಷಣೆ ಮಾಡಲು ವೈಫಲ್ಯ ಕಂಡಿದೆ. ಗಡಿಯಲ್ಲಿ ಸೈನಿಕರು ದಾರುಣವಾಗಿ ಸಾವಿಗೀಡಾದರೂ ಬಾಯಿ ತೆರೆಯದ ಪ್ರಧಾನಿ ಇರುವುದು ದುರ್ದೈವದ ಸಂಗತಿ' ಎಂದು ಟೀಕಿಸಿದರು.<br /> <br /> ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಇಚ್ಛಾಶಕ್ತಿಯ ಕೊರತೆಯಿದೆ. 1 ರೂಪಾಯಿಗೆ ನೀಡುತ್ತಿರುವ 1ಕೆಜಿ ಅಕ್ಕಿ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಶ್ರೀಮಂತರ ದಾಸ್ತಾನು ಮಳಿಗೆಗಳನ್ನು ತಲುಪುತ್ತಿದೆ ಎಂದು ದೂರಿದರು. </p>.<p><strong>ಸಿಖ್ಖರನ್ನು ಕೊಂದದ್ದು ಯಾರು?</strong>: ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, `ರಾಷ್ಟ್ರ ಅಭದ್ರತೆಯನ್ನು ಎದುರಿಸುತ್ತಿದೆ. ಬೆಲೆ ಏರಿಕೆಗೆ ಸಾರ್ವಜನಿಕರು ತತ್ತರಿಸಿದ್ದಾರೆ. ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಶಕ್ತಿ ಇರುವುದು ನರೇಂದ್ರ ಮೋದಿ ಅವರಿಗೆ ಮಾತ್ರ ಎಂದರು.<br /> ನಿದ್ದೆಯಲ್ಲಿಯೇ ಆಡಳಿತದ ಮುಕ್ಕಾಲು ಭಾಗ ಕಳೆದಿರುವ ಸಿದ್ದರಾಮಯ್ಯ ಅವರು ಮೋದಿಯನ್ನು `ನರಹಂತಕ' ಎಂದು ಟೀಕಿಸುತ್ತಾರೆ. 1984ರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ದೊಂಬಿಯಿಂದಾಗಿ ದೆಹಲಿಯಲ್ಲಿ ಸಾವಿರಾರು ಮಂದಿ ಸಿಖ್ ಸಮುದಾಯದವರು ಸತ್ತರು. ಈ ಘಟನೆ ಆಧರಿಸಿ ಕಾಂಗ್ರೆಸಿಗರನ್ನು ನರಭಕ್ಷಕರು, ನರರಾಕ್ಷರು ಎಂದು ಕರೆಯಬಹುದಲ್ಲವೆ? ಎಂದು ವ್ಯಂಗ್ಯವಾಡಿದರು.<br /> <br /> ಸಿದ್ದರಾಮಯ್ಯ ನಿದ್ದೆಯಿಂದ ಎದ್ದು ಬಾಯಿಗೆ ಬಂದದ್ದನ್ನು ಹೇಳುತ್ತಾರೆ. ಇವರದು ನಿದ್ದೆ ಮಾಡುತ್ತಿರುವ ಸರ್ಕಾರ. ನಿದ್ದೆ ಸರ್ಕಾರಕ್ಕೆ ಬುದ್ಧಿ ಕಲಿಸಲು ಮತದಾರರು ಬಹುಮತದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು' ಎಂದರು.ಮುಖಂಡ ಸಿ. ರಮೇಶ್ ಮಾತನಾಡಿ, `ಮಹಾತ್ಮ ಗಾಂಧೀಜಿಯ ಹೆಸರಿನಲ್ಲಿ ನಕಲಿ ಕಾಂಗ್ರೆಸ್ ಕಟ್ಟಿಕೊಂಡಿರುವ ಸೋನಿಯಾ ಗಾಂಧಿಯನ್ನು ದೇಶದಿಂದ ಹೊರದಬ್ಬಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲೊಂದು ಕಾಂಗ್ರೆಸ್ ಇದೆ. ಇಲ್ಲಿನ ಪಕ್ಷದವರು ಎಚ್ಚರದಿಂದಿರಬೇಕು. </p>.<p>9 ಬಾರಿ ಗೆದ್ದಿರುವ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯದ ನಾಯಕರಲ್ಲಿ ಪ್ರಮುಖರಾಗಿದ್ದಾರೆ. ಅವರನ್ನೂ ಈಗ ಕಡೆಗಣಿಸಿದ್ದಾರೆ ಎಂದರು.<br /> ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನಾಗರಾಜಪ್ಪ, ಮುಖಂಡರಾದ ನೂರೊಂದು ಶೆಟ್ಟಿ, ಎಸ್. ಬಾಲಸುಬ್ರಮಣ್ಯ, ಸುಧಾ ಜಯಕುಮಾರ್, ಕಾ.ಪು. ಸಿದ್ದಲಿಂಗ ಸ್ವಾಮಿ, ಎಸ್. ನಿರಂಜನಕುಮಾರ್, ನಂಜುಂಡಸ್ವಾಮಿ, ಕೆ.ಪಿ. ಮಹದೇವಸ್ವಾಮಿ, ಜಿ.ಎಸ್. ನಿತ್ಯಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>`ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 2004ರಲ್ಲಿ ನಡೆದ ಚುನಾವಣೆಯು ಐತಿಹಾಸಿಕ ಫಲಿತಾಂಶ ನೀಡಿತು. ಅದರ ಫಲವಾಗಿ ಕಳೆದ ಹತ್ತು ವರ್ಷದಿಂದ ರಾಜಕೀಯ ವನವಾಸ ಅನುಭವಿಸುತ್ತಿದ್ದೇನೆ. ಈ ವನವಾಸಕ್ಕೆ ಮತದಾರರು ಮುಕ್ತಿ ನೀಡಬೇಕು' ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಕೋರಿದರು.<br /> <br /> ನಗರದ ಗುರುನಂಜಶೆಟ್ಟಿ ಛತ್ರದ ಮುಂಭಾಗ ಬುಧವಾರ ನಡೆದ ಬಿಜೆಪಿಯ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.<br /> ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ನನ್ನ ರಾಜಕೀಯ ಭವಿಷ್ಯ ಅಡಗಿದೆ. ದಿ.ಬಿ. ರಾಚಯ್ಯ ಅವರು ರೈತ ಕುಟುಂಬಗಳಿಗೆ ನೆರವಾಗಿದ್ದರು. ಜನಸೇವೆಯಲ್ಲಿ ತೊಡಗಿದ್ದರು. ಅವರ ಮಗನಾದ ನಾನು ಶಾಸಕನಾಗಿದ್ದ ವೇಳೆ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸ್ದ್ದಿದೇನೆ. ನನ್ನ ಮೇಲೆ ಕರುಣೆ ತೋರಬೇಕು ಎಂದರು.<br /> <br /> ಬಿಜೆಪಿ ರಾಜ್ಯ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿದ್ದ ಕಾಮಗಾರಿಗಳಿಗೆ ಈಗಿನ ಕಾಂಗ್ರೆಸ್ ಜನಪ್ರತಿನಿಧಿಗಳು ಉದ್ಘಾಟನೆ ನೆರವೇರಿಸುತ್ತಿದ್ದಾರೆ. ಬೆಂಗಳೂರು-ಚಾಮರಾಜನಗರ ರೈಲು ಮಾರ್ಗ ನಿರ್ಮಾಣದ ವಿಚಾರದಲ್ಲಿ ಧ್ರುವನಾರಾಯಣ ಕೇವಲ ರೈಲು ಬಿಡುತ್ತಿದ್ದಾರೆ ಎಂದು ಟೀಕಿಸಿದರು.<br /> ಕೇಂದ್ರದ ಯುಪಿಎ ಸರ್ಕಾರ ಹಗರಣಗಳ ಗೂಡಾಗಿದೆ. ಈ ಎಲ್ಲ ಕಾರಣಗಳಿಂದ ಜನರು ಬದಲಾವಣೆ ಬಯಸಿದ್ದಾರೆ ಎಂದ ಅವರು, ನನಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಬೇಕು ಎಂದರು.<br /> <br /> ಮಾಜಿ ಸಚಿವ ವಿ. ಸೋಮಣ್ಣ ಮಾತನಾಡಿ, `ಹಣದುಬ್ಬರ, ರಾಜಕೀಯ ಅರಾಜಕತೆ, ಗಡಿಯಲ್ಲಿ ಭಾರತೀಯ ಸೈನಿಕರ ಸಾವಿನ ಘಟನೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕೇಂದ್ರದ ಯುಪಿಎ ಸರ್ಕಾರ ವಿಫಲವಾಗಿದೆ. ದೇಶದ ರಕ್ಷಣೆ ಮಾಡಲು ವೈಫಲ್ಯ ಕಂಡಿದೆ. ಗಡಿಯಲ್ಲಿ ಸೈನಿಕರು ದಾರುಣವಾಗಿ ಸಾವಿಗೀಡಾದರೂ ಬಾಯಿ ತೆರೆಯದ ಪ್ರಧಾನಿ ಇರುವುದು ದುರ್ದೈವದ ಸಂಗತಿ' ಎಂದು ಟೀಕಿಸಿದರು.<br /> <br /> ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಇಚ್ಛಾಶಕ್ತಿಯ ಕೊರತೆಯಿದೆ. 1 ರೂಪಾಯಿಗೆ ನೀಡುತ್ತಿರುವ 1ಕೆಜಿ ಅಕ್ಕಿ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಶ್ರೀಮಂತರ ದಾಸ್ತಾನು ಮಳಿಗೆಗಳನ್ನು ತಲುಪುತ್ತಿದೆ ಎಂದು ದೂರಿದರು. </p>.<p><strong>ಸಿಖ್ಖರನ್ನು ಕೊಂದದ್ದು ಯಾರು?</strong>: ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, `ರಾಷ್ಟ್ರ ಅಭದ್ರತೆಯನ್ನು ಎದುರಿಸುತ್ತಿದೆ. ಬೆಲೆ ಏರಿಕೆಗೆ ಸಾರ್ವಜನಿಕರು ತತ್ತರಿಸಿದ್ದಾರೆ. ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಶಕ್ತಿ ಇರುವುದು ನರೇಂದ್ರ ಮೋದಿ ಅವರಿಗೆ ಮಾತ್ರ ಎಂದರು.<br /> ನಿದ್ದೆಯಲ್ಲಿಯೇ ಆಡಳಿತದ ಮುಕ್ಕಾಲು ಭಾಗ ಕಳೆದಿರುವ ಸಿದ್ದರಾಮಯ್ಯ ಅವರು ಮೋದಿಯನ್ನು `ನರಹಂತಕ' ಎಂದು ಟೀಕಿಸುತ್ತಾರೆ. 1984ರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ದೊಂಬಿಯಿಂದಾಗಿ ದೆಹಲಿಯಲ್ಲಿ ಸಾವಿರಾರು ಮಂದಿ ಸಿಖ್ ಸಮುದಾಯದವರು ಸತ್ತರು. ಈ ಘಟನೆ ಆಧರಿಸಿ ಕಾಂಗ್ರೆಸಿಗರನ್ನು ನರಭಕ್ಷಕರು, ನರರಾಕ್ಷರು ಎಂದು ಕರೆಯಬಹುದಲ್ಲವೆ? ಎಂದು ವ್ಯಂಗ್ಯವಾಡಿದರು.<br /> <br /> ಸಿದ್ದರಾಮಯ್ಯ ನಿದ್ದೆಯಿಂದ ಎದ್ದು ಬಾಯಿಗೆ ಬಂದದ್ದನ್ನು ಹೇಳುತ್ತಾರೆ. ಇವರದು ನಿದ್ದೆ ಮಾಡುತ್ತಿರುವ ಸರ್ಕಾರ. ನಿದ್ದೆ ಸರ್ಕಾರಕ್ಕೆ ಬುದ್ಧಿ ಕಲಿಸಲು ಮತದಾರರು ಬಹುಮತದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು' ಎಂದರು.ಮುಖಂಡ ಸಿ. ರಮೇಶ್ ಮಾತನಾಡಿ, `ಮಹಾತ್ಮ ಗಾಂಧೀಜಿಯ ಹೆಸರಿನಲ್ಲಿ ನಕಲಿ ಕಾಂಗ್ರೆಸ್ ಕಟ್ಟಿಕೊಂಡಿರುವ ಸೋನಿಯಾ ಗಾಂಧಿಯನ್ನು ದೇಶದಿಂದ ಹೊರದಬ್ಬಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲೊಂದು ಕಾಂಗ್ರೆಸ್ ಇದೆ. ಇಲ್ಲಿನ ಪಕ್ಷದವರು ಎಚ್ಚರದಿಂದಿರಬೇಕು. </p>.<p>9 ಬಾರಿ ಗೆದ್ದಿರುವ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯದ ನಾಯಕರಲ್ಲಿ ಪ್ರಮುಖರಾಗಿದ್ದಾರೆ. ಅವರನ್ನೂ ಈಗ ಕಡೆಗಣಿಸಿದ್ದಾರೆ ಎಂದರು.<br /> ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನಾಗರಾಜಪ್ಪ, ಮುಖಂಡರಾದ ನೂರೊಂದು ಶೆಟ್ಟಿ, ಎಸ್. ಬಾಲಸುಬ್ರಮಣ್ಯ, ಸುಧಾ ಜಯಕುಮಾರ್, ಕಾ.ಪು. ಸಿದ್ದಲಿಂಗ ಸ್ವಾಮಿ, ಎಸ್. ನಿರಂಜನಕುಮಾರ್, ನಂಜುಂಡಸ್ವಾಮಿ, ಕೆ.ಪಿ. ಮಹದೇವಸ್ವಾಮಿ, ಜಿ.ಎಸ್. ನಿತ್ಯಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>