ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಮಗೆ ಮುತ್ತೈದೆ ಭಾಗ್ಯ... ನಮಗೆ ಮತ ಭಾಗ್ಯ’

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರಾಜು ಅವರ ಪತ್ನಿ ಸುಜಾತ ಅವರು ಚಿಕ್ಕಬಾಣಾವರದಲ್ಲಿ ಮಹಿಳೆಯರಿಗೆ ಬಳೆ ತೊಡಿಸಿ, ಅರಿಶಿನ ಕುಂಕುಮ ಕೊಟ್ಟು ಮತ ಕೇಳಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಸ್ತ್ರೀಶಕ್ತಿ ಸಂಘದ ಮಹಿಳೆ ತಿಳಿಸಿದರು.

‘ಸ್ತೀಶಕ್ತಿ ಗುಂಪುಗಳಿಗೆ ವಿಶೇಷ ಸಭೆ ಇದೆ ಎಂದು ಹೇಳಿ ಕರೆಸಿದರು. ಸಭೆಗೆಂದು ಬಂದ ಮಹಿಳೆಯರಿಗೆ ಗೌರಿ ಹಬ್ಬದಲ್ಲಿ ಬಾಗಿನ ನೀಡುವಂತೆ ಎಲ್ಲರಿಗೂ ಉಡಿ ತುಂಬಿದರು’ ಎಂದರು. ‌‘ನನ್ನ ಗಂಡನಿಗೆ ಮತ ಹಾಕಿ. ಈ ಸಾರಿ ಗೆದ್ದರೆ ಮೂರನೇ ಬಾರಿ ಅವಕಾಶ ಸಿಕ್ಕಂತಾಗುತ್ತದೆ. ಮಾಡಬೇಕಾಗಿರುವ ಅಭಿವೃದ್ಧಿ ಕೆಲಸಗಳು ಸಾಕಷ್ಟು ಇವೆ. ನಿಮ್ಮ ಕಷ್ಟದಲ್ಲಿ ನಾವು ಭಾಗಿಯಾಗುತ್ತೇವೆ. ಮುತ್ತೈದೆ ಭಾಗ್ಯದ ಎಲ್ಲಾ ಸಂಕೇತಗಳನ್ನು ಉಡುಗೊರೆಯಾಗಿ ಕೊಟ್ಟಿದ್ದೇನೆ. ಮತ ಹಾಕುವ ಭರವಸೆ ನೀಡಿ ಎಂದು ಸುಜಾತಾ ಕೋರಿದರು’ ಎಂದರು.

‘ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ಬಿಜೆಪಿ ಏಜೆಂಟರಲ್ಲ. ಸ್ವಾವಲಂಬನೆಯಿಂದ ಬದುಕು ಸಾಧಿಸಲು ಸಂಘ ರೂಪಿಸಿಕೊಂಡಿದ್ದೇವೆ. ಇವರೇನು ನಮ್ಮ ಬದುಕು ಉದ್ಧಾರ ಮಾಡುವುದು’ ಎಂದು ಮಹಿಳೆಯೊಬ್ಬರು ಪ್ರಶ್ನಿಸಿದರು.

‘ಬಿಜೆಪಿಯ ಕೆಲ ಮುಖಂಡರು ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ. ಈ ಬೆಳವಣಿಗೆ ಶಾಸಕರಲ್ಲಿ ನಡುಕ ಹುಟ್ಟಿಸಿದೆ’ ಎಂದು ಗ್ರಾಮದ ಕೆಲವು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT