‘ರಾಗಿಯಷ್ಟೇ, ಸಿರಿಧಾನ್ಯಗಳಾದ ನವಣೆ, ಆರ್ಕ, ಸಾಮೆ, ಊದಲು, ಬರಗು, ಸಜ್ಜೆ, ಕೊರಲು ಆರೋಗ್ಯದ ದೃಷ್ಟಿಯಿಂದ ಉತ್ತಮ ಧಾನ್ಯಗಳಾಗಿವೆ. ಜನರು ಕೂಡ ಬಾಯಿ ಚಪಲಕ್ಕಾಗಿ ಸಿಕ್ಕಸಿಕ್ಕ ಆಹಾರ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಆಹಾರದಲ್ಲಿ ಸಿರಿಧಾನ್ಯಗಳಿಗೆ ಒತ್ತು ನೀಡಿದರೆ ಅದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಜತೆಗೆ ಸಿರಿಧಾನ್ಯಗಳ ಬೆಳೆಯುವ ರೈತರಿಗೂ ಉತ್ತೇಜನ ನೀಡಿದಂತಾಗುತ್ತದೆ’ ಎಂದರು.