ಶಿಬಿರದಲ್ಲಿ ಕಾಗತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಜನತೆ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಾಗತಿ ಗ್ರಾ.ಪಂ. ಅಧ್ಯಕ್ಷ ಎಸ್. ನಾಗರಾಜ್, ಉಪಾಧ್ಯಕ್ಷೆ ಶಾಜೀಯಾಬಾನು, ಮುಖಂಡ ವೆಂಕಟರೆಡ್ಡಿ, ಬಿ.ಜಿ. ನಾರಾಯಣಸ್ವಾಮಿ, ದಿಲೀಪ್, ಸಿಡಿಪಿಒ ಮಹೇಂದ್ರ, ಪಿಡಿಒ ಜಿ.ಎನ್. ಲೋಕೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.