‘ಈ ಕೊಲೆಯ ಉದ್ದೇಶಕ್ಕಾಗಿಯೇ ಪ್ರಮುಖ ಆರೋಪಿ, ವಕೀಲ ನವೀನ್ ಆ.8 ರಂದು ಹೊಸ ಸಿಮ್ ಮತ್ತು ಮೊಬೈಲ್ ಖರೀದಿಸಿದ್ದ. ಆ.17 ರಂದು ಆ ಸಿಮ್ನ ಸೇವೆ ಸ್ಥಗಿತಗೊಳಿಸಿದ್ದ. ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್, ನಗರ ಪೊಲೀಸ್ ಠಾಣೆ ಎಸ್ಐ ಹೊನ್ನೇಗೌಡ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಪ್ರಕರಣ ಬೇಧಿಸಿದ ತಂಡಕ್ಕೆ ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು.