ಪ್ರತಿ ತಾಲ್ಲೂಕಿನಿಂದ ಆಯ್ದ 100 ವಿದ್ಯಾರ್ಥಿಗಳನ್ನು ಈ ಪರಿಸರ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಸೂಲಾಲಪ್ಪನ ದಿನ್ನೆ ಅರಣ್ಯ ಪ್ರದೇಶ, ಬಾಗೇಪಲ್ಲಿಯಲ್ಲಿ ಪರಗೋಡು ಅರಣ್ಯ, ಚಿಂತಾಮಣಿ ತಾಲ್ಲೂಕಿನಲ್ಲಿ ಕಾಡುಮಲ್ಲೇಶ್ವರ ಬೆಟ್ಟ, ಗೌರಿಬಿದನೂರಿನಲ್ಲಿ ಕುರೂಡಿ ಅರಣ್ಯ, ಶಿಡ್ಲಘಟ್ಟ ಹೊರವಲಯದ ಅರಣ್ಯ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಈ ಪ್ರವಾಸ ಆಯೋಜಿಸಲಾಗಿತ್ತು.