ನಿರ್ದೇಶಕನಾಗಿದ್ದ ವೇಳೆ ಹೈನುಗಾರರ ಪರವಾಗಿ ಕೆಲಸ ಮಾಡಿದ್ದೇನೆ. ಇದು ಹೈನುಗಾರರಿಗೆ ಮತ್ತು ಡೆಲಿಗೇಟ್ಗಳಿಗೆ ಗೊತ್ತು. ಇದೇ ನನಗೆ ಶ್ರೀರಕ್ಷೆ. ಈ ಕಾರಣದಿಂದ ನನಗೆ ಗೆಲ್ಲುವ ವಿಶ್ವಾಸವಿದೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಮಾದರಿಯಾಗಿ ರೂಪಿಸಬೇಕಾಗಿದೆ. ಈ ಕಾರಣಕ್ಕೆ ಮತ್ತೆ ನಿರ್ದೇಶಕನನ್ನಾಗಿ ಮಾಡಿ ಎಂದು ಮತದಾರರಲ್ಲಿ ಕೋರುತ್ತಿದ್ದೇನೆ.
-ಎನ್.ಸಿ.ವೆಂಕಟೇಶ್
ಹಾಲಿನ ದರ ಕಡಿಮೆ ಇದೆ. ರೈತರ ಶ್ರಮಕ್ಕೆ ತಕ್ಕ ಬೆಲೆ ದೊರೆಯುತ್ತಿಲ್ಲ. ದರ ಹೆಚ್ಚಳಕ್ಕೆ ಶ್ರಮಿಸುವೆ. ಹಾಲು ಉತ್ಪನ್ನಗಳು ಮತ್ತಷ್ಟು ಹೆಚ್ಚಬೇಕು. ರಾಸುಗಳ ಚಿಕಿತ್ಸೆ ವಿಚಾರವಾಗಿ ಸಮಸ್ಯೆಗಳು ಇವೆ. ಹಾಲಿನ ದರ ಹೆಚ್ಚಿದರೆ ಮತ್ತೊಂದು ಕಡೆ ಪಶು ಆಹಾರದ ಬೆಲೆಯೂ ಹೆಚ್ಚುತ್ತದೆ. ಹೀಗೆ ಎಲ್ಲ ವಿಚಾರಗಳಲ್ಲಿಯೂ ಹೈನುಗಾರರ ಹಿತ ಕಾಪಾಡಲು ಶ್ರಮಿಸುವೆ.