ರಾತ್ರಿ ದೇವಾಲಯದ ಒಳಗೆ ನುಗ್ಗಿದ ಕಳ್ಳರು ವಿದ್ಯುತ್ ದೀಪಗಳನ್ನು ತೆಗೆದು ಹಾಕಿ, ಹುಂಡಿಯನ್ನು ದೇವಾಲಯ ಸಮೀಪದ ನೀಲಗಿರಿ ತೋಪಿಗೆ ಹೊತ್ತು ಒಯ್ದು ಅದರಲ್ಲಿ ನೋಟುಗಳನ್ನು ತೆಗೆದುಕೊಂಡು, ಚಿಲ್ಲರೆಯನ್ನು ಹಾಗೇ ಬಿಟ್ಟು ಪರಾರಿಯಾಗಿದ್ದಾರೆ. ಬೆಳಿಗ್ಗೆ ಅರ್ಚಕರು ದೇವಾಲಯಕ್ಕೆ ಪೂಜೆಗೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ.