<p><strong>ಚಿಕ್ಕಬಳ್ಳಾಪುರ</strong>: ಸಕಲ ರಂಗಹೆಜ್ಜೆ ಸಂಸ್ಥೆಯು ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸುಗ್ಗಿ ನಾಟಕೋತ್ಸವವೂ ಜನರ ಮನಸೂರೆಗೊಂಡಿತು. ಎರಡು ದಿನಗಳ ನಾಟಕೋತ್ಸವದಲ್ಲಿ ನಾಟಕಗಳು, ವಿಚಾರ ಸಂಕಿರಣ, ಚಿತ್ರಕಲಾ ಪ್ರದರ್ಶನಗಳು ನಡೆದವು.</p>.<p>ದಿಲೀಪ್ ಕುಮಾರ್ ಆರ್. ನಿರ್ದೇಶನದ ‘ಡರ್ ಬರ್ ಬುಡ್ಡಣ್ಣ’, ಮತ್ತು ರಂಗಸಿರಿ ತಂಡದ ಮಧು ನಿರ್ದೇಶನದ ‘ಶೂದ್ರ ತಪಸ್ವಿ’ ನಾಟಕವು ಮೊದಲ ದಿನ ಪ್ರದರ್ಶನಗೊಂಡವು.</p>.<p>ನಾಟಕೋತ್ಸವಕ್ಕೆ ಚಾಲನೆ ನೀಡಿದ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ಈಗಿನ ಆಧುನಿಕ ಬದುಕಿನಲ್ಲಿ ಪೋಷಕರು ಮೊಬೈಲು, ಟಿವಿಗಳಿಗೆ ಮಕ್ಕಳನ್ನು ಹತ್ತಿರವಾಗಿಸುತ್ತಿದ್ದಾರೆ. ನಮ್ಮ ಕಲೆ, ಪರಂಪರೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಮಕ್ಕಳಿಗೂ ಕಲಿಸುವಲ್ಲಿ, ಅದನ್ನ ಮುಂದುವರೆಸುವುದರಲ್ಲಿ ತಮ್ಮ ಹೆಜ್ಜೆಗಳನ್ನು ಹಿಂದೆ ಇಡುತ್ತಿದ್ದಾರೆ’ ಎಂದು ಹೇಳಿದರು.</p>.<p>ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ವ್ಯಾಸಂಗ ಮಾಡಿಸುತ್ತಿಲ್ಲ. ಖಾಸಗಿ ಶಾಲೆಗಳಿಗೆ ಸೇರಿಸಿ ನಮ್ಮ ನೆಲ, ಸಂಸ್ಕೃತಿ, ನೆಲದ ಕಥೆಗಳನ್ನು ಮರೆಯುತ್ತಿದ್ದೇವೆ. ದಿಲೀಪ್ ಕುಮಾರ್ ಮಕ್ಕಳ ಜೊತೆ ರಂಗಭೂಮಿಯನ್ಟುನತ್ತಿರುವುದು ಈ ಭಾಗಕ್ಕೆ ದೊಡ್ಡ ಕೊಡುಗೆ. ಸಕಲರಂಗ ಹೆಜ್ಜೆ ಸಂಸ್ಥೆ ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಲಿ ಎಂದು ಆಶಿಸಿದರು.</p>.<p>ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಲೇಖಕರಾದ ಪಾತಮುತ್ತಕರಹಳ್ಳಿ ಮು.ಚಲಪತಿ ಗೌಡ, ಜಲಜ, ಸತೀಶ್ ಸಿ.ಎಲ್, ರಾಜೇಶ್ ಜಿ, ಭಾಸ್ಕರ್ ಬಾಬು ಮತ್ತಿತರರು ಪಾಲ್ಗೊಂಡಿದ್ದರು.</p>.<p class="Subhead">ಮುಲ್ಲಾ ನಸ್ರುದ್ದೀನ್ ಪ್ರದರ್ಶನ: ನಾಟಕೋತ್ಸವದ ಎರಡನೇ ದಿನ ನಿರ್ದಿಗಂತ ತಂಡವು ಶಕೀಲಾ ಅಹ್ಮದ್ ನಿರ್ದೇಶನದ ‘ಕೊಡಲ್ಲ ಅಂದ್ರೆ ಕೊಡಲ್ಲ’, ಕಾಲಿ ರಂಗ ತಂಡದ ನಿರಂಜನ್ ನಿರ್ದೇಶನದ ‘ಮುಲ್ಲಾ ನಸ್ರುದ್ದೀನ’ ನಾಟಕಗಳು ಪ್ರದರ್ಶನಗೊಂಡವು.</p>.<p>ಕರ್ನಾಟಕ ವೈಜ್ಞಾನಿಕ ಸಂಶೋಧನಾ ಮಂಡಳಿಯ ಹುಲಿಕಲ್ ನಟರಾಜ್, ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ, ನಾಗಮಣಿ ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ದೇವನಹಳ್ಳಿ ದೇವರಾಜ್, ಪುತ್ತೂರು ಲೋಕೇಶಪ್ಪ, ರಾಜಶೇಖರ್ ಪಾಲ್ಗೊಂಡಿದ್ದರು.</p>
<p><strong>ಚಿಕ್ಕಬಳ್ಳಾಪುರ</strong>: ಸಕಲ ರಂಗಹೆಜ್ಜೆ ಸಂಸ್ಥೆಯು ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸುಗ್ಗಿ ನಾಟಕೋತ್ಸವವೂ ಜನರ ಮನಸೂರೆಗೊಂಡಿತು. ಎರಡು ದಿನಗಳ ನಾಟಕೋತ್ಸವದಲ್ಲಿ ನಾಟಕಗಳು, ವಿಚಾರ ಸಂಕಿರಣ, ಚಿತ್ರಕಲಾ ಪ್ರದರ್ಶನಗಳು ನಡೆದವು.</p>.<p>ದಿಲೀಪ್ ಕುಮಾರ್ ಆರ್. ನಿರ್ದೇಶನದ ‘ಡರ್ ಬರ್ ಬುಡ್ಡಣ್ಣ’, ಮತ್ತು ರಂಗಸಿರಿ ತಂಡದ ಮಧು ನಿರ್ದೇಶನದ ‘ಶೂದ್ರ ತಪಸ್ವಿ’ ನಾಟಕವು ಮೊದಲ ದಿನ ಪ್ರದರ್ಶನಗೊಂಡವು.</p>.<p>ನಾಟಕೋತ್ಸವಕ್ಕೆ ಚಾಲನೆ ನೀಡಿದ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ಈಗಿನ ಆಧುನಿಕ ಬದುಕಿನಲ್ಲಿ ಪೋಷಕರು ಮೊಬೈಲು, ಟಿವಿಗಳಿಗೆ ಮಕ್ಕಳನ್ನು ಹತ್ತಿರವಾಗಿಸುತ್ತಿದ್ದಾರೆ. ನಮ್ಮ ಕಲೆ, ಪರಂಪರೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಮಕ್ಕಳಿಗೂ ಕಲಿಸುವಲ್ಲಿ, ಅದನ್ನ ಮುಂದುವರೆಸುವುದರಲ್ಲಿ ತಮ್ಮ ಹೆಜ್ಜೆಗಳನ್ನು ಹಿಂದೆ ಇಡುತ್ತಿದ್ದಾರೆ’ ಎಂದು ಹೇಳಿದರು.</p>.<p>ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ವ್ಯಾಸಂಗ ಮಾಡಿಸುತ್ತಿಲ್ಲ. ಖಾಸಗಿ ಶಾಲೆಗಳಿಗೆ ಸೇರಿಸಿ ನಮ್ಮ ನೆಲ, ಸಂಸ್ಕೃತಿ, ನೆಲದ ಕಥೆಗಳನ್ನು ಮರೆಯುತ್ತಿದ್ದೇವೆ. ದಿಲೀಪ್ ಕುಮಾರ್ ಮಕ್ಕಳ ಜೊತೆ ರಂಗಭೂಮಿಯನ್ಟುನತ್ತಿರುವುದು ಈ ಭಾಗಕ್ಕೆ ದೊಡ್ಡ ಕೊಡುಗೆ. ಸಕಲರಂಗ ಹೆಜ್ಜೆ ಸಂಸ್ಥೆ ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಲಿ ಎಂದು ಆಶಿಸಿದರು.</p>.<p>ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಲೇಖಕರಾದ ಪಾತಮುತ್ತಕರಹಳ್ಳಿ ಮು.ಚಲಪತಿ ಗೌಡ, ಜಲಜ, ಸತೀಶ್ ಸಿ.ಎಲ್, ರಾಜೇಶ್ ಜಿ, ಭಾಸ್ಕರ್ ಬಾಬು ಮತ್ತಿತರರು ಪಾಲ್ಗೊಂಡಿದ್ದರು.</p>.<p class="Subhead">ಮುಲ್ಲಾ ನಸ್ರುದ್ದೀನ್ ಪ್ರದರ್ಶನ: ನಾಟಕೋತ್ಸವದ ಎರಡನೇ ದಿನ ನಿರ್ದಿಗಂತ ತಂಡವು ಶಕೀಲಾ ಅಹ್ಮದ್ ನಿರ್ದೇಶನದ ‘ಕೊಡಲ್ಲ ಅಂದ್ರೆ ಕೊಡಲ್ಲ’, ಕಾಲಿ ರಂಗ ತಂಡದ ನಿರಂಜನ್ ನಿರ್ದೇಶನದ ‘ಮುಲ್ಲಾ ನಸ್ರುದ್ದೀನ’ ನಾಟಕಗಳು ಪ್ರದರ್ಶನಗೊಂಡವು.</p>.<p>ಕರ್ನಾಟಕ ವೈಜ್ಞಾನಿಕ ಸಂಶೋಧನಾ ಮಂಡಳಿಯ ಹುಲಿಕಲ್ ನಟರಾಜ್, ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ, ನಾಗಮಣಿ ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ದೇವನಹಳ್ಳಿ ದೇವರಾಜ್, ಪುತ್ತೂರು ಲೋಕೇಶಪ್ಪ, ರಾಜಶೇಖರ್ ಪಾಲ್ಗೊಂಡಿದ್ದರು.</p>