ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ. ಅರ್ಹತೆ, ಸಾಮರ್ಥ್ಯದ ಮೇಲೆ ಸಿಗಲಿ. ಆದರೆ ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಜಾತಿ, ಜಿಲ್ಲೆ ಲೆಕ್ಕಾಚಾರದ ಅಳತೆಗೋಲು ಇಟ್ಟುಕೊಂಡು ಇವತ್ತಿನ ಮಂತ್ರಿಗಳನ್ನು ಮಾಡಲಾಗುತ್ತಿದೆ. ಹೀಗಾಗಿ ಅರ್ಹತೆ, ಸಾಮರ್ಥ್ಯ ಹಿನ್ನೆಲೆಗೆ ಸರಿದಿವೆ’ ಎಂದು ತಿಳಿಸಿದರು.