ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಜೆ. ಶಿವಕುಮಾರ್ ಮಾತನಾಡಿ, ಅಂಗಡಿಗಳ ಮುಂದೆ ಗುಂಪುಗಾರಿಕೆಗೆ ಅವಕಾಶ ನೀಡಬೇಡಿ. ಗ್ರಾಹಕರು ಅಂತರವನ್ನು ಕಾಪಾಡಿಕೊಡಿಕೊಂಡು ನಿಂತುಕೊಳ್ಳಲು ತಿಳಿಸಬೇಕು. ಆದಷ್ಟು ಜಾಗ್ರತೆಯಾಗಿ ಅವರಿಗೆ ಬೇಕಾದ ವಸ್ತುಗಳನ್ನು ನೀಡಿ ಕಳುಹಿಸಬೇಕು. ಅಂಗಡಿಗಳ ಬಳಿ ಸ್ವಚ್ಛತೆ ಕಾಪಾಡಬೇಕು. ಮಾಲೀಕರು ಮಾಸ್ಕ್ ಧರಿಸಬೇಕು ಎಂದು ಹೇಳಿದರು.