ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕೋವಿಡ್ ವಯೋವೃದ್ಧರಿಗೆ, ಕಾಯಿಲೆಗಳಿಂದ ಬಳಲುವವರ ಪಾಲಿಗೆ ತುಸು ಕಷ್ಟವಾಗುತ್ತದೆ. ವಯಸ್ಕರರಿಗೆ ಪ್ರಾಣಾಪಾಯವಿಲ್ಲ. ಹೀಗಾಗಿ ನಾನು ಧೈರ್ಯದಿಂದ ಇದ್ದು, ಆತಂಕದಲ್ಲಿ ಇದ್ದವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಒಳ್ಳೆಯ ಅಡುಗೆ ಮಾಡಿಸಿ ನಮ್ಮ ವಾರ್ಡ್ನಲ್ಲಿದ್ದವರಿಗೆಲ್ಲ ತಲುಪಿಸಿದೆ.