ಚೇಳೂರು: ಚೇಳೂರಿನಲ್ಲಿದ್ದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ನ ಎಟಿಎಂ ಮುಚ್ಚಲಾಗಿದೆ. ಇದರಿಂದಾಗಿ ಸ್ಥಳೀಯ ಗ್ರಾಹಕರು ನಗದಿಗಾಗಿ ಬೇರೆಡೆ ಹೋಗುವ ಪ್ರಮೇಯ ಬಂದಿದೆ.
ಕುರಿ, ಮೇಕೆ ಸಂತೆ, ತರಕಾರಿ ಮಾರುಕಟ್ಟೆಗೆ ಬರುವವರಿಗೆ ಈ ಎಟಿಎಂ ಸಹಕಾರಿ ಆಗಿತ್ತು. ಈಗ ಮುಚ್ಚಿದ್ದರಿಂದ ಅನಾನುಕೂಲ ಆಗಿದೆ.
ಎಟಿಎಂ ಸೌಲಭ್ಯವನ್ನು ಬ್ಯಾಂಕಿನವರು ಉಚಿತವಾಗೇನೂ ನೀಡಲ್ಲ. ಅದಕ್ಕೆ ವರ್ಷಕ್ಕೆ ಇಂತಿಷ್ಟು ಎಂದು ಗ್ರಾಹಕರಿಂದ ಶುಲ್ಕ ಪಡೆಯುತ್ತಾರೆ. ಬ್ಯಾಂಕಿನ ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಹಕ ಜೆ.ಕೆ.ರಾಮಚಂದ್ರ ಒತ್ತಾಯಿಸಿದರು.