ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೀರು ಸಂಸ್ಕರಣಾ ಘಟಕದಲ್ಲಿ ಆರು ಹೊಂಡಗಳಿವೆ. ಅವುಗಳ ಪೈಕಿ ಅಂತಿಮವಾಗಿ ನೀರು ಶುದ್ಧೀಕರಿಸುವ ಎರಡು ಹೊಂಡಗಳಲ್ಲಿ ನೂರು ಬಾತುಕೋಳಿಗಳನ್ನು ಬಿಡಲಾಗಿದೆ. ಇದೊಂದು ಪರಿಸರ ಸ್ನೇಹಿ ಪ್ರಯೋಗವಾಗಿದ್ದು, ತ್ಯಾಜ್ಯ ನೀರಿನ ಸಂಸ್ಕರಣೆಗೆ ಯಂತ್ರಗಳ ಬದಲು ಪಕ್ಷಿಗಳನ್ನು ಬಳಕೆ ಮಾಡಲಾಗುತ್ತಿದೆ’ ಎಂದು ಹೇಳಿದರು.