ಬುಧವಾರ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಎಲೆ, ಅಡಿಕೆ ಖರೀದಿಸುತ್ತಿದ್ದಾಗ ಬಂದ ಅಪರಿಚಿತ ಮಹಿಳೆಯೊಬ್ಬರು, ಆಸ್ಪತ್ರೆಗೆ ಎಲ್ಲಿದೆ ಎಂದು ಕೇಳಿದಳು. ಹೀಗೆ ಮಾತುಕತೆ ನಡೆಸಿದ ಆಕೆ, ತನ್ನ ಮಗಳಿಗೆ ಆರೋಗ್ಯ ಸರಿ ಇಲ್ಲ. ಹೀಗಾಗಿ ಆಕೆಗೆ ಚಿಕಿತ್ಸೆ ಕೊಡಿಸಬೇಕು. ಆದರೆ, ತನ್ನಲ್ಲಿ ಹಣವಿಲ್ಲದ ಕಾರಣ ಆಸ್ಪತ್ರೆ ವೆಚ್ಚಕ್ಕಾಗಿ ತನ್ನಲ್ಲಿರುವ ಬಂಗಾರದ ಗುಂಡುಗಳು ಮತ್ತು ಕಾಸುಗಳನ್ನು ಪೋಣಿಸುವ ಎರಡು ಕರಿಮಣಿ ಸರಗಳನ್ನು ಮಾರಬೇಕು. ಆದರೆ, ಬಂಗಾರದ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ತಾವು 2 ಲಕ್ಷ ಕೊಟ್ಟರೆ, ಮಾರುತ್ತೇನೆ ಎಂದಿದ್ದರು ಎಂದು ಸಂತ್ರಸ್ತ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.