‘ಮಿಡತೆಗಳು ಹೊರಗಿನಿಂದ ಬಂದಿಲ್ಲ. ಸ್ಥಳೀಯವಾಗಿರುವ ಹಾಗೂ ಕಳೆ ಸಸ್ಯಗಳನ್ನು ತಿನ್ನುವ ಮಿಡತೆಗಳಾಗಿವೆ. ಇವುಗಳಿಂದ ಯಾವುದೇ ಬೆಳೆಗಳಿಗೆ ತೊಂದರೆ ಇಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲ. ಇವುಗಳು ಸ್ಥಳೀಯವಾಗಿಯೇ ಹುಟ್ಟಿ ಬೆಳೆಯುತ್ತವೆ. ಯಾವುದೇ ವದಂತಿಗಳಿಗೆ ಕಿವಿಗೊಡದಿರಿ’ ಎಂದು ಅಧಿಕಾರಿಗಳು ಹೇಳಿದರು.