ಕಾಲೇಜು ತಾತ್ಕಾಲಿಕವಾಗಿ ನಡೆಯುತ್ತಿರುವ ಸಿಟಿಜನ್ ಕ್ಲಬ್ ಆವರಣಕ್ಕೆ ಬಂದ ನ್ಯಾಯಮೂರ್ತಿ, ಶೌಚಾಲಯ, ಕಾಲೇಜಿನ ಆವರಣ ಪರಿಶೀಲಿಸಿದರು.
ಆವರಣದಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದಿದ್ದವು. ಅನೈರ್ಮನ್ಯ ಹೆಚ್ಚಿತ್ತು. ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ವ್ಯವಸ್ಥೆ ಸರಿಪಡಿಸುವುದಾಗಿ ಹೇಳಿದರು. 30 ನಿಮಿಷಕ್ಕೂ ಹೆಚ್ಚು ಕಾಲ ಸ್ಥಳದಲ್ಲಿದ್ದರು. ಅಗತ್ಯ ಸಲಕರಣೆಗಳನ್ನು ತರಿಸಿ ನಾನೇ ಸ್ವಚ್ಛತೆ ಮಾಡುತ್ತೇನೆ. ನಂತರವೇ ಇಲ್ಲಿಂದ ತೆರಳುವುದು ಎಂದರು.