<p><strong>ಚಿಂತಾಮಣಿ</strong>: ತಾಲ್ಲೂಕಿನ ಕೈವಾರದ ಅಂಬೇಡ್ಕರ್ ವಿದ್ಯಾಸಂಸ್ಥೆಯಲ್ಲಿ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ರಾಷ್ಟೀಯ ಗಣಿತ ದಿನವನ್ನು ಸೋಮವಾರ ಆಚರಿಸಲಾಯಿತು.</p>.<p>ಸಂಸ್ಥೆ ಅಧ್ಯಕ್ಷೆ ಎಸ್.ಎಂ ರೋಜ ಮಾತನಾಡಿ, ‘ಗಣಿತದ ವಿಚಾರದಲ್ಲಿ ಭಾರತವು ವಿಶ್ವಕ್ಕೆ ದೊಡ್ಡ ಕೊಡುಗೆ ನೀಡಿದೆ. ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಮಾಡಿದರೆ ಗಣಿತ ಸುಲಭವಾಗಲಿದೆ. ಹೆಚ್ಚು ಗಣಿತ ಅಭ್ಯಾಸ ಮಾಡಿ ಕಲಿಕೆಯನ್ನು ಸುಲಭ ಮಾಡಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. </p>.<p>ಗಣಿತ ಶಿಕ್ಷಕಿ ಯೋಗಮ್ಮ ಮಲ್ಲಾಪುರ ಮಾತನಾಡಿ, ಗಣಿತ ಎಂದರೆ ಕಬ್ಬಿಣದ ಕಡಲೆ ಅಲ್ಲ. ಗಣಿತ ಸೂತ್ರಗಳು, ಮಗ್ಗಿಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಗಣಿತ ಸುಲಿದ ಬಾಳೆಹಣ್ಣಿನಷ್ಟೇ ಸುಲಭ. ಮುಂದುವರೆದ ಭಿನ್ನರಾಶಿ, ಸಂಖ್ಯೆ ಸಿದ್ಧಾಂತ, ಅನಂತ್ ಸರಣಿಗಳ ಸಾಧನೆ ತಿಳಿಸಿದರು.</p>.<p>ಮುಖ್ಯ ಶಿಕ್ಷಕ ಸುರೇಶ್ ಮಾತನಾಡಿ, ಶ್ರೀನಿವಾಸ ರಾಮಾನುಜನ್ ಅವರ 125ನೇ ಜಯಂತಿಯಾದ 2012ರಲ್ಲಿ ದೇಶದಲ್ಲಿ ರಾಷ್ಟೀಯ ಗಣಿತ ದಿನಾಚರಣೆ ಆರಂಭಿಸಲಾಯಿತು. ರಾಮಾನುಜನ್ ಅವರ ಜೀವನ ಮತ್ತು ಸಾಧನೆಗಳನ್ನು ಹೇಳಿದರು.</p>.<p>ಗಣಿತ ದಿನದ ಕುರಿತು ಮಕ್ಕಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಕನ್ನಡ ಮಾದ್ಯಮದಲ್ಲಿ ಹರ್ಷಿಣಿ ಪ್ರಥಮ, ಹಂಸಿಕ ದ್ವಿತೀಯ, ಪ್ರೇಮ ತೃತಿಯ ಸ್ಥಾನ ಪಡೆದರು.</p>.<p>ಆಂಗ್ಲ ಮಾದ್ಯಮದಲ್ಲಿ ಬಿ.ಬಿ.ಫಾತಿಮಾ ಪ್ರಥಮ, ಪ್ರೀತಿ ದ್ವಿತೀಯ, ತನುಶ್ರೀ ತೃತೀಯ ಸ್ಥಾನ ಪಡೆದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಿಕ್ಷಕರಾದ ಲೋಕೇಶಪ್ಪ, ಶ್ರೀಧರ ಹಿರೇಮಠ,ಜ್ಞಾನೇಶ್ವರಿ, ಉಮೇಶ, ಹರೀಶ್, ಭಾಗ್ಯಮ್ಮ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ</strong>: ತಾಲ್ಲೂಕಿನ ಕೈವಾರದ ಅಂಬೇಡ್ಕರ್ ವಿದ್ಯಾಸಂಸ್ಥೆಯಲ್ಲಿ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ರಾಷ್ಟೀಯ ಗಣಿತ ದಿನವನ್ನು ಸೋಮವಾರ ಆಚರಿಸಲಾಯಿತು.</p>.<p>ಸಂಸ್ಥೆ ಅಧ್ಯಕ್ಷೆ ಎಸ್.ಎಂ ರೋಜ ಮಾತನಾಡಿ, ‘ಗಣಿತದ ವಿಚಾರದಲ್ಲಿ ಭಾರತವು ವಿಶ್ವಕ್ಕೆ ದೊಡ್ಡ ಕೊಡುಗೆ ನೀಡಿದೆ. ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಮಾಡಿದರೆ ಗಣಿತ ಸುಲಭವಾಗಲಿದೆ. ಹೆಚ್ಚು ಗಣಿತ ಅಭ್ಯಾಸ ಮಾಡಿ ಕಲಿಕೆಯನ್ನು ಸುಲಭ ಮಾಡಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. </p>.<p>ಗಣಿತ ಶಿಕ್ಷಕಿ ಯೋಗಮ್ಮ ಮಲ್ಲಾಪುರ ಮಾತನಾಡಿ, ಗಣಿತ ಎಂದರೆ ಕಬ್ಬಿಣದ ಕಡಲೆ ಅಲ್ಲ. ಗಣಿತ ಸೂತ್ರಗಳು, ಮಗ್ಗಿಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಗಣಿತ ಸುಲಿದ ಬಾಳೆಹಣ್ಣಿನಷ್ಟೇ ಸುಲಭ. ಮುಂದುವರೆದ ಭಿನ್ನರಾಶಿ, ಸಂಖ್ಯೆ ಸಿದ್ಧಾಂತ, ಅನಂತ್ ಸರಣಿಗಳ ಸಾಧನೆ ತಿಳಿಸಿದರು.</p>.<p>ಮುಖ್ಯ ಶಿಕ್ಷಕ ಸುರೇಶ್ ಮಾತನಾಡಿ, ಶ್ರೀನಿವಾಸ ರಾಮಾನುಜನ್ ಅವರ 125ನೇ ಜಯಂತಿಯಾದ 2012ರಲ್ಲಿ ದೇಶದಲ್ಲಿ ರಾಷ್ಟೀಯ ಗಣಿತ ದಿನಾಚರಣೆ ಆರಂಭಿಸಲಾಯಿತು. ರಾಮಾನುಜನ್ ಅವರ ಜೀವನ ಮತ್ತು ಸಾಧನೆಗಳನ್ನು ಹೇಳಿದರು.</p>.<p>ಗಣಿತ ದಿನದ ಕುರಿತು ಮಕ್ಕಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಕನ್ನಡ ಮಾದ್ಯಮದಲ್ಲಿ ಹರ್ಷಿಣಿ ಪ್ರಥಮ, ಹಂಸಿಕ ದ್ವಿತೀಯ, ಪ್ರೇಮ ತೃತಿಯ ಸ್ಥಾನ ಪಡೆದರು.</p>.<p>ಆಂಗ್ಲ ಮಾದ್ಯಮದಲ್ಲಿ ಬಿ.ಬಿ.ಫಾತಿಮಾ ಪ್ರಥಮ, ಪ್ರೀತಿ ದ್ವಿತೀಯ, ತನುಶ್ರೀ ತೃತೀಯ ಸ್ಥಾನ ಪಡೆದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಿಕ್ಷಕರಾದ ಲೋಕೇಶಪ್ಪ, ಶ್ರೀಧರ ಹಿರೇಮಠ,ಜ್ಞಾನೇಶ್ವರಿ, ಉಮೇಶ, ಹರೀಶ್, ಭಾಗ್ಯಮ್ಮ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>