ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

LS Polls: ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ಚಿಕ್ಕಬಳ್ಳಾಪುರದತ್ತ ಸುಳಿಯದ ಶಾಸಕ

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ಸ್ವಕ್ಷೇತ್ರಕ್ಕೆ ಬಾರದ ‍ಪ್ರದೀಪ್ ಈಶ್ವರ್
Published : 13 ಜೂನ್ 2024, 4:27 IST
Last Updated : 13 ಜೂನ್ 2024, 4:27 IST
ಫಾಲೋ ಮಾಡಿ
Comments
ಅವಕಾಶ ಕೈ ಚೆಲ್ಲುತ್ತಿದ್ದಾರೆಯೇ ಪ್ರದೀಪ್?
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮೇಲೆ ದೊಡ್ಡಮಟ್ಟದಲ್ಲಿ ಪ್ರಭಾವ ಇಟ್ಟುಕೊಳ್ಳಲು ಶಾಸಕ ಪ್ರದೀಪ್ ಈಶ್ವರ್‌ಗೆ ಹಲವು ಅವಕಾಶಗಳು ಇವೆ. ಈ ಉತ್ತಮ ಅವಕಾಶಗಳನ್ನು ಶಾಸಕರು ಕೈ ಚೆಲ್ಲುತ್ತಿದ್ದಾರೆ ಎನ್ನುವ ವಿಶ್ಲೇಷಣೆಯೂ ಕ್ಷೇತ್ರದ ರಾಜಕೀಯ ವಲಯದಲ್ಲಿ ಇದೆ. ಕ್ಷೇತ್ರದಲ್ಲಿ ಅಹಿಂದ ಮತದಾರರ ಸಂಖ್ಯೆ ದೊಡ್ಡದಿದೆ. ರಾಜ್ಯ ಮಟ್ಟದಲ್ಲಿ ಬಲಿಜ ಸಮುದಾಯಕ್ಕೆ ಶಾಸಕರ ನಾಯಕತ್ವದ ಕೊರತೆಯೂ ಇದೆ. ‘ನಮಸ್ತೆ ಚಿಕ್ಕಬಳ್ಳಾಪುರ’ದ ಮೂಲಕ ಪ್ರದೀಪ್ ಭರವಸೆಗಳನ್ನು ಮೂಡಿಸಿದ್ದರು. ಸುಲಭವಾಗಿ ಜನರ ಕೈಗೆ ಸಿಗುವರು ದ್ವೇಷ ರಾಜಕೀಯ ಮಾಡುವುದಿಲ್ಲ ಎನ್ನುವ ಮಾತುಗಳು ಆರಂಭದಲ್ಲಿ ಇದ್ದವು. ಹೀಗೆ ನಾನಾ ರೀತಿಯ ‘ಮತಲೆಕ್ಕ’ದ ಮೂಲಕ ಚಿಕ್ಕಬಳ್ಳಾಪುರ ರಾಜಕಾರಣವನ್ನು ತಮ್ಮ ತೆಕ್ಕೆಯಲ್ಲಿ ಇಟ್ಟುಕೊಳ್ಳಲು ಅವಕಾಶಗಳು ಇವೆ. ಆದರೆ ಶಾಸಕರ ನಡೆಗಳು ಮತಗಳು ‘ಕೈ’ ಚೆಲ್ಲುವಂತೆ ಮಾಡಿದೆ ಎನ್ನುವ ವಿಶ್ಲೇಷಣೆ ಜೋರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT