<p><strong>ಚಿಂತಾಮಣಿ: </strong>ತಾಲ್ಲೂಕಿನ ಕಾಗತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಚಂದ್ರನ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ಹಾಗೂ ವಾಲ್ಮೀಕಿ ಜಯಂತಿ ಆಚರಣೆಯು ಶ್ರದ್ಧಾಭಕ್ತಿಯಿಂದ ನಡೆಯಿತು.</p>.<p>ಸಾಮೂಹಿಕ ಪ್ರಾರ್ಥನೆ, ಹಿತನುಡಿ, ಚಂದ್ರನ ಪೂಜಾ ನಂತರ ಶ್ರೀನಿವಾಸಪುರ ತಾಲ್ಲೂಕಿನ ಸಾತಾಂಡ್ಲಹಳ್ಳಿ ಗ್ರಾಮದ ಮಂಜುಳಮ್ಮ, ಲಕ್ಷ್ಮಮ್ಮ, ಮುನಿಯಮ್ಮ ಮುದ್ದಲಪಲ್ಲಿ ರಾಮಕೃಷ್ಣಾರೆಡ್ಡಿ, ನಾನಮ್ಮ, ಮುನಿವೆಂಕಟಮ್ಮ, ಶಿವ, ಕರಿಯಪ್ಪಲ್ಲಿ ಗ್ರಾಮದ ಶಿವಮ್ಮ, ಬಡಗವಾರಹಳ್ಳಿ ಕದಿರಮ್ಮ, ನರಸಮ್ಮ, ಅನುಪ್ಪಲ್ಲಿ ನಾರಾಯಣಸ್ವಾಮಿ ತತ್ವಪದಗಳ ಗಾಯನ ಮಾಡಿದರು.</p>.<p>ಭಕ್ತರ ಗಾಯನಕ್ಕೆ ಬುಕ್ಕನಹಳ್ಳಿ ನರಸಿಂಹಪ್ಪ ತಬಲ ಮತ್ತು ಕಾಗತಿ ವೆಂಕಟಕೃಷ್ಣ ಅವರು ಹಾರ್ಮೋನಿಯಂ ಸಾಥ್ ನೀಡಿದರು. ಸಮಾಜಕ್ಕೆ ದಾರಿ ತೋರುವ ಹಲವಾರು ಅರ್ಥಗರ್ಭಿತ ತತ್ವಪದಗಳನ್ನು ತಂಡಗಳಲ್ಲಿ ರಾತ್ರಿ ಪ್ರಾರಂಭ ಮಾಡಿ, ಮರುದಿನ ಬೆಳಗಿನ ಜಾವದವರೆಗೂ ಗಾಯನ ಮಾಡಿದರು.</p>.<p>ತತ್ವಪದಗಳ ಸಂಶೋಧಕ ಚಿಕ್ಕಬಳ್ಳಾಪುರದ ಗೋಪಾಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಪ್ರಾತಃ ಸ್ಮರಣೀಯರು. ಸಹವಾಸಗಳಿಂದಾಗಿ ಮನುಷ್ಯ ಹೇಗೆ ಮಾರ್ಪಾಡಾಗಿ ಮಹರ್ಷಿ ಆಗಬಲ್ಲನು ಎಂಬುದಕ್ಕೆ ನಿದರ್ಶನರಾಗಿದ್ದಾರೆ<br />ಎಂದರು.</p>.<p>ದೇವಾಯಲದ ಟ್ರಸ್ಟ್ ಅಧ್ಯಕ್ಷ ಕಾಗತಿ ವೆಂಕಟರತ್ನಂ ಮಾತನಾಡಿ, ಸತ್ಸಂಗಗಳಿಂದ ಜೀವನ ಸುಗಮ ದಾರಿಯಲ್ಲಿ ಸಾಗಿ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಶಾಂತಿ, ನೆಮ್ಮದಿಯ ಜತೆಗೆ ಜನರಲ್ಲಿ ಮಾನಸಿಕ ಸ್ಥಿರತೆಗೆ ಸತ್ಸಂಗ ಸಹಕಾರಿಯಾಗಿದೆ. ಜನರು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ತಮ ಸನ್ಮಾರ್ಗವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.</p>.<p>ಕಾಗತಿ ಗ್ರಾಮದ ನಿವೃತ್ತ ಮೇಲ್ವಿಚಾರಕ ವಿ. ನಾಗರಾಜ, ವಕೀಲ ಶ್ರೀನಿವಾಸನ್, ರೈತ ರವಿ ಅವರು ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ಕಾಗತಿ ಕೃಷ್ಣಮ್ಮನವರ ಕೃಷ್ಣಪ್ಪ ಗಜೇಂದ್ರ, ಚಲಪತಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ: </strong>ತಾಲ್ಲೂಕಿನ ಕಾಗತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಚಂದ್ರನ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ಹಾಗೂ ವಾಲ್ಮೀಕಿ ಜಯಂತಿ ಆಚರಣೆಯು ಶ್ರದ್ಧಾಭಕ್ತಿಯಿಂದ ನಡೆಯಿತು.</p>.<p>ಸಾಮೂಹಿಕ ಪ್ರಾರ್ಥನೆ, ಹಿತನುಡಿ, ಚಂದ್ರನ ಪೂಜಾ ನಂತರ ಶ್ರೀನಿವಾಸಪುರ ತಾಲ್ಲೂಕಿನ ಸಾತಾಂಡ್ಲಹಳ್ಳಿ ಗ್ರಾಮದ ಮಂಜುಳಮ್ಮ, ಲಕ್ಷ್ಮಮ್ಮ, ಮುನಿಯಮ್ಮ ಮುದ್ದಲಪಲ್ಲಿ ರಾಮಕೃಷ್ಣಾರೆಡ್ಡಿ, ನಾನಮ್ಮ, ಮುನಿವೆಂಕಟಮ್ಮ, ಶಿವ, ಕರಿಯಪ್ಪಲ್ಲಿ ಗ್ರಾಮದ ಶಿವಮ್ಮ, ಬಡಗವಾರಹಳ್ಳಿ ಕದಿರಮ್ಮ, ನರಸಮ್ಮ, ಅನುಪ್ಪಲ್ಲಿ ನಾರಾಯಣಸ್ವಾಮಿ ತತ್ವಪದಗಳ ಗಾಯನ ಮಾಡಿದರು.</p>.<p>ಭಕ್ತರ ಗಾಯನಕ್ಕೆ ಬುಕ್ಕನಹಳ್ಳಿ ನರಸಿಂಹಪ್ಪ ತಬಲ ಮತ್ತು ಕಾಗತಿ ವೆಂಕಟಕೃಷ್ಣ ಅವರು ಹಾರ್ಮೋನಿಯಂ ಸಾಥ್ ನೀಡಿದರು. ಸಮಾಜಕ್ಕೆ ದಾರಿ ತೋರುವ ಹಲವಾರು ಅರ್ಥಗರ್ಭಿತ ತತ್ವಪದಗಳನ್ನು ತಂಡಗಳಲ್ಲಿ ರಾತ್ರಿ ಪ್ರಾರಂಭ ಮಾಡಿ, ಮರುದಿನ ಬೆಳಗಿನ ಜಾವದವರೆಗೂ ಗಾಯನ ಮಾಡಿದರು.</p>.<p>ತತ್ವಪದಗಳ ಸಂಶೋಧಕ ಚಿಕ್ಕಬಳ್ಳಾಪುರದ ಗೋಪಾಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಪ್ರಾತಃ ಸ್ಮರಣೀಯರು. ಸಹವಾಸಗಳಿಂದಾಗಿ ಮನುಷ್ಯ ಹೇಗೆ ಮಾರ್ಪಾಡಾಗಿ ಮಹರ್ಷಿ ಆಗಬಲ್ಲನು ಎಂಬುದಕ್ಕೆ ನಿದರ್ಶನರಾಗಿದ್ದಾರೆ<br />ಎಂದರು.</p>.<p>ದೇವಾಯಲದ ಟ್ರಸ್ಟ್ ಅಧ್ಯಕ್ಷ ಕಾಗತಿ ವೆಂಕಟರತ್ನಂ ಮಾತನಾಡಿ, ಸತ್ಸಂಗಗಳಿಂದ ಜೀವನ ಸುಗಮ ದಾರಿಯಲ್ಲಿ ಸಾಗಿ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಶಾಂತಿ, ನೆಮ್ಮದಿಯ ಜತೆಗೆ ಜನರಲ್ಲಿ ಮಾನಸಿಕ ಸ್ಥಿರತೆಗೆ ಸತ್ಸಂಗ ಸಹಕಾರಿಯಾಗಿದೆ. ಜನರು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ತಮ ಸನ್ಮಾರ್ಗವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.</p>.<p>ಕಾಗತಿ ಗ್ರಾಮದ ನಿವೃತ್ತ ಮೇಲ್ವಿಚಾರಕ ವಿ. ನಾಗರಾಜ, ವಕೀಲ ಶ್ರೀನಿವಾಸನ್, ರೈತ ರವಿ ಅವರು ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ಕಾಗತಿ ಕೃಷ್ಣಮ್ಮನವರ ಕೃಷ್ಣಪ್ಪ ಗಜೇಂದ್ರ, ಚಲಪತಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>