<p><strong>ಗೌರಿಬಿದನೂರು:</strong> ಮಂಚೇನಹಳ್ಳಿ ತಾಲ್ಲೂಕಿನ ಮಿನಕನಗುರ್ಕಿ ಗ್ರಾಮ ಪಂಚಾಯಿತಿ ಹೆಚ್ಚುವರಿ ಪಿಡಿಒ ಚಂದ್ರಶೇಖರ್ ಮತ್ತು ಪಂಚಾಯಿತಿ ಅಧ್ಯಕ್ಷ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪಂಚಾಯಿತಿ ಸದಸ್ಯರು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟಿಸಿದರು.</p>.<p>ಪಂಚಾಯಿತಿ ಪಿಡಿಒ ರಾಘವೇಂದ್ರ ಅನಾರೋಗ್ಯ ನಿಮಿತ್ತ ಒಂದು ತಿಂಗಳ ರಜೆ ಹಾಕಿದ್ದರು. ಆ ಜಾಗಕ್ಕೆ ಬಂದ ಹೆಚ್ಚುವರಿ ಪಿಡಿಒ ಚಂದ್ರಶೇಖರ್ ಮತ್ತು ಅಧ್ಯಕ್ಷೆಯ ಪತಿ ₹2 ಲಕ್ಷದ ನಾಲ್ಕು ಚೆಕ್ ಗಳನ್ನು ಒಂದೇ ಹೆಸರಿನಲ್ಲಿ ಬರೆದು ಸರ್ಕಾರದ ಹಣ ದುರುಪಯೋಗಪಡಿಸಿದ್ದಾರೆ ಎಂದು ಸದಸ್ಯರು ಆರೋಪಿಸಿದರು.</p>.<p>ಈ ಕುರಿತು ಮಾತನಾಡಿ ಸದಸ್ಯ ಕಾಂತರಾಜು ಮಾತನಾಡಿ, ಪಿಡಿಒ ಜಿಎಸ್ಟಿ ಬಿಲ್ ಇಲ್ಲದೆ ₹2 ಲಕ್ಷದ 5 ಚೆಕ್ ಗಳನ್ನು ಬರೆದು ಬ್ಯಾಂಕಿಗೆ ಕಳುಹಿಸಿದ್ದಾರೆ. ಅವುಗಳನ್ನು ಈಗ ತಡೆಹಿಡಿಯಲಾಗಿದೆ. ಚೆಕ್ ತೋರಿಸಿ ಎಂದರೆ ಅವರ ಬಳಿ ಇಲ್ಲ. ಇದನ್ನು ಸಿಇಒ ಗಮನಕ್ಕೆ ತರಲಾಗುವುದು ಎಂದರು. </p>.<p>ಸದಸ್ಯ ನಾಗರಾಜ್ ಮಾತನಾಡಿ, ಅಧ್ಯಕ್ಷರ ಅವಧಿ ನಿನ್ನೆಗೆ ಮುಕ್ತಾಯವಾಗಿದೆ. ಈ ಬಗ್ಗೆ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹಣವನ್ನು ಅವರಿಗೆ ಬೇಕಾದ ಖಾತೆಗೆ ತುಂಬಿಸಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.</p>.<p>ಮತ್ತೊಬ್ಬ ಸದಸ್ಯ ವೆಂಕಟೇಶ್, ಚಾರ್ಜ್ ಪಿಡಿಒ ಚಂದ್ರಶೇಖರ್ ಅಕ್ರಮವಾಗಿ ನಮ್ಮ ಪಂಚಾಯಿತಿ ಹಣವನ್ನು ಡ್ರಾ ಮಾಡಿದ್ದು ಯಾವುದೇ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಪಂಚಾಯಿತಿ ಹಣ ದುರುಪಯೋಗವಾಗಿದೆ ಎಂದರು. </p>.<p>ಮಂಗಳವಾರ ವಿಷಯ ತಿಳಿದ ಪಿಡಿಒ ರಾಘವೇಂದ್ರ, ಹೆಚ್ಚುವರಿ ಪಿಡಿಒ ಚಂದ್ರಶೇಖರ್ ಅವರನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದರು. ಅದರೆ, ಅವರು ಸರಿಯಾದ ಮಾಹಿತಿ ನೀಡಲಿಲ್ಲ ಎಂದರು.</p>.<p>ಈ ವೇಳೆ ಬಾಲಕೃಷ್ಣ, ಮಂಜುನಾಥ್, ರಾಘವೇಂದ್ರ, ಸುಬ್ರಮಣಿ, ಅಮೀರ್, ನಾಗರಾಜು ಸೇರಿದಂತೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು:</strong> ಮಂಚೇನಹಳ್ಳಿ ತಾಲ್ಲೂಕಿನ ಮಿನಕನಗುರ್ಕಿ ಗ್ರಾಮ ಪಂಚಾಯಿತಿ ಹೆಚ್ಚುವರಿ ಪಿಡಿಒ ಚಂದ್ರಶೇಖರ್ ಮತ್ತು ಪಂಚಾಯಿತಿ ಅಧ್ಯಕ್ಷ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪಂಚಾಯಿತಿ ಸದಸ್ಯರು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟಿಸಿದರು.</p>.<p>ಪಂಚಾಯಿತಿ ಪಿಡಿಒ ರಾಘವೇಂದ್ರ ಅನಾರೋಗ್ಯ ನಿಮಿತ್ತ ಒಂದು ತಿಂಗಳ ರಜೆ ಹಾಕಿದ್ದರು. ಆ ಜಾಗಕ್ಕೆ ಬಂದ ಹೆಚ್ಚುವರಿ ಪಿಡಿಒ ಚಂದ್ರಶೇಖರ್ ಮತ್ತು ಅಧ್ಯಕ್ಷೆಯ ಪತಿ ₹2 ಲಕ್ಷದ ನಾಲ್ಕು ಚೆಕ್ ಗಳನ್ನು ಒಂದೇ ಹೆಸರಿನಲ್ಲಿ ಬರೆದು ಸರ್ಕಾರದ ಹಣ ದುರುಪಯೋಗಪಡಿಸಿದ್ದಾರೆ ಎಂದು ಸದಸ್ಯರು ಆರೋಪಿಸಿದರು.</p>.<p>ಈ ಕುರಿತು ಮಾತನಾಡಿ ಸದಸ್ಯ ಕಾಂತರಾಜು ಮಾತನಾಡಿ, ಪಿಡಿಒ ಜಿಎಸ್ಟಿ ಬಿಲ್ ಇಲ್ಲದೆ ₹2 ಲಕ್ಷದ 5 ಚೆಕ್ ಗಳನ್ನು ಬರೆದು ಬ್ಯಾಂಕಿಗೆ ಕಳುಹಿಸಿದ್ದಾರೆ. ಅವುಗಳನ್ನು ಈಗ ತಡೆಹಿಡಿಯಲಾಗಿದೆ. ಚೆಕ್ ತೋರಿಸಿ ಎಂದರೆ ಅವರ ಬಳಿ ಇಲ್ಲ. ಇದನ್ನು ಸಿಇಒ ಗಮನಕ್ಕೆ ತರಲಾಗುವುದು ಎಂದರು. </p>.<p>ಸದಸ್ಯ ನಾಗರಾಜ್ ಮಾತನಾಡಿ, ಅಧ್ಯಕ್ಷರ ಅವಧಿ ನಿನ್ನೆಗೆ ಮುಕ್ತಾಯವಾಗಿದೆ. ಈ ಬಗ್ಗೆ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹಣವನ್ನು ಅವರಿಗೆ ಬೇಕಾದ ಖಾತೆಗೆ ತುಂಬಿಸಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.</p>.<p>ಮತ್ತೊಬ್ಬ ಸದಸ್ಯ ವೆಂಕಟೇಶ್, ಚಾರ್ಜ್ ಪಿಡಿಒ ಚಂದ್ರಶೇಖರ್ ಅಕ್ರಮವಾಗಿ ನಮ್ಮ ಪಂಚಾಯಿತಿ ಹಣವನ್ನು ಡ್ರಾ ಮಾಡಿದ್ದು ಯಾವುದೇ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಪಂಚಾಯಿತಿ ಹಣ ದುರುಪಯೋಗವಾಗಿದೆ ಎಂದರು. </p>.<p>ಮಂಗಳವಾರ ವಿಷಯ ತಿಳಿದ ಪಿಡಿಒ ರಾಘವೇಂದ್ರ, ಹೆಚ್ಚುವರಿ ಪಿಡಿಒ ಚಂದ್ರಶೇಖರ್ ಅವರನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದರು. ಅದರೆ, ಅವರು ಸರಿಯಾದ ಮಾಹಿತಿ ನೀಡಲಿಲ್ಲ ಎಂದರು.</p>.<p>ಈ ವೇಳೆ ಬಾಲಕೃಷ್ಣ, ಮಂಜುನಾಥ್, ರಾಘವೇಂದ್ರ, ಸುಬ್ರಮಣಿ, ಅಮೀರ್, ನಾಗರಾಜು ಸೇರಿದಂತೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>