ನಾಯಕರನ್ನು ಮೆಚ್ಚಿಸಲು ಬ್ಯಾನರ್, ಬಂಟಿಗ್ಸ್: ದೇವನಹಳ್ಳಿಗೆ ಈಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಸಮಯದಲ್ಲಿ ಬ್ಯಾನರ್, ಬಂಟಿಗ್ಸ್ ಹಾಕಲಾಗಿತ್ತು. ಇನ್ನೂ ಜೆಡಿಎಸ್ ಯುವ ಪರ್ವ ಕಾರ್ಯಕ್ರಮಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಕ್ಷದ ಬ್ಯಾನರ್, ಧ್ವಜಗಳನ್ನು ಕಟ್ಟಲಾಗಿದೆ. ಆಗಸದೆತ್ತರದ ಬಂಟಿಗ್ಸ್ ಹಾಗೆಯೇ ಉಳಿದಿದೆ. ವೆಲ್ತೇರ್ ಫೌಂಡೇಷನ್ ಕಚೇರಿ ಉದ್ಘಾಟನೆಯಾಗಿ ಎರಡು ಮೂರು ತಿಂಗಳು ಕಳೆದರೂ ದೊಡ್ಡ ಕಟ್ ಔಟ್ಗಳು ಇನ್ನೂ ತೆರವುಗೊಳಿಸಿಲ್ಲ.