ಗ್ರಾಮದ ಸಮೀಪ ಇರುವ ಆನೆ ಕಂಬರಾಯ ದೇವಾಲಯದ ಆವರಣದಲ್ಲಿ ರಾಮಚಂದ್ರಪುರದ ಯುವಕನೊಂದಿಗೆ ಗುರುವಾರ ಬಾಲ್ಯವಿವಾಹಕ್ಕೆ ತಯಾರಿ ನಡೆಸಲಾಗುತ್ತಿತ್ತು. ಈ ಕುರಿತು ಮಕ್ಕಳ ಸಹಾಯವಾಣಿಗೆ ಮಾಹಿತಿ ಬಂದ ಕಾರಣ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಮದ್ ಉಸ್ಮಾನ್, ಅಂಗನವಾಡಿ ಮೇಲ್ವಿಚಾರಕಿ ಪುಷ್ಪಲತಾ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಅಮ್ಮಾಜಾನ್ ಭೇಟಿ ನೀಡಿ ವಿವಾಹವನ್ನು ತಡೆದಿದ್ದಾರೆ.