ಚಿಂತಾಮಣಿ-ಹೊಸಕೋಟೆ ರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನ ಹಾಗೂ ತಿಂಗಳಿನಲ್ಲಿ ಸಂಚರಿಸುವ ಸರಾಸರಿ ವಾಹನಗಳ ಸಂಖ್ಯೆ, ಟೋಲ್ ವಿಧಿಸುವ ಮಾರ್ಗಸೂಚಿಗಳ ವಿವರ, 2 ಟೋಲ್ ಕೇಂದ್ರಗಳ ನಡುವೆ ಇರಬೇಕಾದ ಅಂತರ. ಪ್ರಸ್ತುತ ರಸ್ತೆಯಲ್ಲಿರುವ ಉಬ್ಬುಗಳ ಸಂಖ್ಯೆ. ದ್ವಿಪಥದಿಂದ ಚತುಷ್ಪದ ರಸ್ತೆಯನ್ನಾಗಿಸುವ ಯೋಜನೆ ಬಗ್ಗೆ ಮಾಹಿತಿ ಕೋರಿ ಯುವಶಕ್ತಿಯ ಪರವಾಗಿ ರಾಜ್ಯ ಜಂಟಿ ಕಾರ್ಯದರ್ಶಿ ವಿನೋದ್ ಸಿ.ರೆಡ್ಡಿ ಅರ್ಜಿ ಸಲ್ಲಿಸಿದ್ದಾರೆ.