ಚಿಕ್ಕಬಳ್ಳಾಪುರ: ತಮ್ಮ ಹೆಸರಿನಲ್ಲಿ ಜಮೀನಿನ ಖಾತೆಗಳು ಇಲ್ಲದಿರುವುದು, ಅಜ್ಜ, ಅಪ್ಪಂದಿರ ಹೆಸರಿನಲ್ಲಿಯೇ ದಾಖಲೆಗಳು ಇರುವುದು, ಪೌತಿ ಖಾತೆ ಮಾಡಿಸಿಕೊಳ್ಳದಿರುವುದು... ಹೀಗೆ ದಾಖಲೆಗಳು ತಮ್ಮ ಹೆಸರಿನಲ್ಲಿ ಇಲ್ಲದ ಕಾರಣ ಇಂದಿಗೂ ಜಿಲ್ಲೆಯಲ್ಲಿ ಬಹಳಷ್ಟು ಬಡ, ಮಧ್ಯಮ ವರ್ಗದ ರೈತರು ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆಯಿಂದ ಹೊರಗೆ ಉಳಿದಿದ್ದಾರೆ.