ಸರ್ಕಾರ ಶ್ರೀಗಂಧದ ಮರ ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ. ಅರಣ್ಯ ಇಲಾಖೆ ಮರಗಳನ್ನು ಬೆಳೆಸಲು ಅನುಮತಿ ನೀಡಿ, ಸಸಿಗಳನ್ನು ಒದಗಿಸುತ್ತಿದೆ. ರೈತರು 10–15 ವರ್ಷಗಳಿಂದ ಕಷ್ಟಪಟ್ಟು ಬೆಳೆದ ಮರಗಳು ರಾತ್ರೋರಾತ್ರಿ ಕಳ್ಳತನವಾಗುತ್ತಿವೆ. ಆದರೆ, ಈ ಸಂಬಂಧ ಪೊಲೀಸರು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ದೂರಿದರು.