<p><strong>ಚಿಂತಾಮಣಿ</strong>: ಗುರುವಾರ ನಗರ ಹಾಗೂ ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಸಂಕ್ರಾಂತಿ ಆಚರಿಸಲಾಯಿತು. </p>.<p>ನಗರದ 31ನೇ ವಾರ್ಡ್ ತಿಮ್ಮಸಂದ್ರದಲ್ಲಿ ಮಹಿಳೆಯರಿಂದ ದೀಪೋತ್ಸವ, ರಾಸುಗಳ ಮೆರವಣಿಗೆ ನಡೆಯಿತು.</p>.<p>ಮನೆಗಳಲ್ಲಿ ಮಹಿಳೆಯರು ಬೆಳಿಗ್ಗೆ ಎಳ್ಳೆಣ್ಣೆಸ್ನಾನ ಮಾಡಿ, ತಳಿರು ತೋರಣಗಳಿಂದ ಸಿಂಗರಿಸುವುದು, ಮನೆಗಳ ಮುಂದೆ ರಂಗೋಲಿ ಬಿಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಜನರು ಮನೆಗಳಲ್ಲಿ ಪೂಜೆ, ಗೋಪೂಜೆ ಮಾಡಿದರು. ಎಳ್ಳು, ಕಡಲೆಬೀಜ, ಕೊಬ್ಬರಿ ಅಚ್ಚುಬೆಲ್ಲ, ಸಕ್ಕರೆ ಅಚ್ಚು, ಹುರಿಗಡಲೆ ಸೇರಿಸಿ ತಯಾರಿಸಿದ್ದ ಎಳ್ಳು-ಬೆಲ್ಲ ಮತ್ತು ನವಧಾನ್ಯಗಳನ್ನು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಿದರು.</p>.<p>ಸಂಜೆ ಮಹಿಳೆಯರು ಹೊಸ ಉಡುಗೆಗಳೊಂದಿಗೆ ಮನೆ ಮನೆಗೂ ತೆರಳಿ ಎಳ್ಳು ಬೀರಿದರು. ಕೆಲವು ಕಡೆ ಸಂಘ ಸಂಸ್ಥೆಗಳಿಂದ ರಂಗೋಲಿ ಸ್ಪರ್ಧೆ, ಗಾಯನ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿತ್ತು.</p>.<p>ದನಕರುಗಳನ್ನು ತೊಳೆದು ಸಿಂಗಾರ ಮಾಡಿ ಪೂಜಿಸಿ ಮೆರವಣಿಗೆ ಮಾಡಿದರು. ಸಂಜೆ ಬೆಂಕಿ ಮೇಲೆ ಹಾಯಿಸಿರುವುದು, ಯುವಜನರು ಬೆಂಕಿಯ ಪಂಜು ಭರಾಟೆಗಳನ್ನು ತಿರುಗಿಸುವುದರ ಮೂಲಕ ಸಂಭ್ರಮಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ</strong>: ಗುರುವಾರ ನಗರ ಹಾಗೂ ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಸಂಕ್ರಾಂತಿ ಆಚರಿಸಲಾಯಿತು. </p>.<p>ನಗರದ 31ನೇ ವಾರ್ಡ್ ತಿಮ್ಮಸಂದ್ರದಲ್ಲಿ ಮಹಿಳೆಯರಿಂದ ದೀಪೋತ್ಸವ, ರಾಸುಗಳ ಮೆರವಣಿಗೆ ನಡೆಯಿತು.</p>.<p>ಮನೆಗಳಲ್ಲಿ ಮಹಿಳೆಯರು ಬೆಳಿಗ್ಗೆ ಎಳ್ಳೆಣ್ಣೆಸ್ನಾನ ಮಾಡಿ, ತಳಿರು ತೋರಣಗಳಿಂದ ಸಿಂಗರಿಸುವುದು, ಮನೆಗಳ ಮುಂದೆ ರಂಗೋಲಿ ಬಿಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಜನರು ಮನೆಗಳಲ್ಲಿ ಪೂಜೆ, ಗೋಪೂಜೆ ಮಾಡಿದರು. ಎಳ್ಳು, ಕಡಲೆಬೀಜ, ಕೊಬ್ಬರಿ ಅಚ್ಚುಬೆಲ್ಲ, ಸಕ್ಕರೆ ಅಚ್ಚು, ಹುರಿಗಡಲೆ ಸೇರಿಸಿ ತಯಾರಿಸಿದ್ದ ಎಳ್ಳು-ಬೆಲ್ಲ ಮತ್ತು ನವಧಾನ್ಯಗಳನ್ನು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಿದರು.</p>.<p>ಸಂಜೆ ಮಹಿಳೆಯರು ಹೊಸ ಉಡುಗೆಗಳೊಂದಿಗೆ ಮನೆ ಮನೆಗೂ ತೆರಳಿ ಎಳ್ಳು ಬೀರಿದರು. ಕೆಲವು ಕಡೆ ಸಂಘ ಸಂಸ್ಥೆಗಳಿಂದ ರಂಗೋಲಿ ಸ್ಪರ್ಧೆ, ಗಾಯನ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿತ್ತು.</p>.<p>ದನಕರುಗಳನ್ನು ತೊಳೆದು ಸಿಂಗಾರ ಮಾಡಿ ಪೂಜಿಸಿ ಮೆರವಣಿಗೆ ಮಾಡಿದರು. ಸಂಜೆ ಬೆಂಕಿ ಮೇಲೆ ಹಾಯಿಸಿರುವುದು, ಯುವಜನರು ಬೆಂಕಿಯ ಪಂಜು ಭರಾಟೆಗಳನ್ನು ತಿರುಗಿಸುವುದರ ಮೂಲಕ ಸಂಭ್ರಮಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>