ಗೌರಿಬಿದನೂರು: ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಗುರುವಾರ 75ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಸಮೀಪದ ಮಸೀದಿಯಿಂದ ಆಜಾನ್ ಶಬ್ದ ಕೇಳಿತು.
ತಕ್ಷಣವೇ ಸಿದ್ದರಾಮಯ್ಯ ತಮ್ಮ ಭಾಷಣಕ್ಕೆ ತಾತ್ಕಾಲಿಕ ವಿರಾಮ ನೀಡಿದರು. ಜನರು ಶಿಳ್ಳೆ ಹಾಕಿದರು. ಸಮಾಧಾನದಿಂದ ಇರುವಂತೆ ಜನರಿಗೆ ಕೈ ಸನ್ನೆ ಮಾಡಿದರು. ಪಕ್ಕದಲ್ಲಿ ಇದ್ದವರನ್ನು ಆಜಾನ್ ಮುಗಿತಾ... ಎಂದು ಕೇಳಿದರು. ಸ್ವಲ್ಪ ಸಮಯ ಸುಮ್ಮನಿದ್ದು ಮತ್ತೆ ಭಾಷಣ ಆರಂಭಿಸಿದರು.