<p><strong>ಶಿಡ್ಲಘಟ್ಟ:</strong> ಅವಿಭಜಿತ ಕೋಲಾರ ಜಿಲ್ಲೆ ಪುರಾತನ ದೇವಾಲಯಗಳಲ್ಲಿ ತಾಲ್ಲೂಕಿನ ಗುಡಿಹಳ್ಳಿ ಸೋಮೇಶ್ವರ ದೇವಾಲಯವೂ ಒಂದು. ಶಿವಲಿಂಗದ ಶೈಲಿಯನ್ನು ಗಮನಿಸಿದರೆ ಈ ದೇವಾಲಯ ಗಂಗರ ಕಾಲದಲ್ಲಿ ನಿರ್ಮಾಣವಾಗಿರಬಹುದು. ಆದರೆ, ಶಾಸನಗಳ ಆಧಾರದ ಪ್ರಕಾರ ಚೋಳರ ಕಾಲದಲ್ಲಿ ಈ ದೇವಾಲಯ ಜೀರ್ಣೋದ್ಧಾರವಾಗಿರುವ ದಾಖಲೆಗಳಿವೆ ಎನ್ನುತ್ತಾರೆ ಶಾಸನ ತಜ್ಞರು.</p>.<p>ದೇವಾಲಯದ ಆವರಣದಲ್ಲಿ ಒಟ್ಟು ನಾಲ್ಕು ಶಾಸನಗಳಿವೆ. ಇವು ಎಪಿಗ್ರಾಫಿಯಾ ಕರ್ನಾಟಕದ ಹತ್ತನೇ ಸಂಪುಟದಲ್ಲಿ ಪ್ರಕಟವಾಗಿವೆ. ಇವುಗಳಲ್ಲಿ ಮೂರು ಕುಲೋತುಂಗ ಚೋಳನ ಕಾಲದವು. ಒಂದು ಕರ್ನಾಟಕ ಸಾಮ್ರಾಜ್ಯದ ಆರಂಭ ಕಾಲದ್ದು.</p>.<p><strong>66ನೇ ಶಾಸನ (ಕ್ರಿ.ಶ. 1080):</strong> ರಾಜಮಾಣಿಕ್ಕವೇಲನ್ ಎಂಬ ವೀರ ಸ್ತ್ರೀಯರ ಮಾನ ಕಾಪಾಡಲು ಹೋಗಿ ಹುತಾತ್ಮನಾದ ಸಂದರ್ಭದ 'ಪೆಣ್ಬಯಿಲ್' ಶಾಸನ ಇದು. ಇದನ್ನು ಆತನ ಮಗ ಇರುಗನ್ ರಾಜಮಾಣಿಕ್ಕವೇಲನ್ ಹಾಕಿಸಿದ.</p>.<p><strong>67ನೇ ಶಾಸನ (ಕ್ರಿ.ಶ. 1346)</strong>: ದೇವಾಲಯದ ಅಧಿಷ್ಠಾನದ ಮೇಲಿರುವ ಈ ಶಾಸನದ ಪ್ರಕಾರ, ಗುಡಿಹಳ್ಳಿ ಅಂಬಡಕ್ಕಿ ನಾಡಿನ ಭಾಗವಾಗಿತ್ತು. ಆಗ ಅಂಕಯ್ಯನಾಯಕ ಆಡಳಿತಗಾರನಾಗಿದ್ದ. ಅಂಬಡಕ್ಕಿ ನಾಡಿನ ಧರ್ಮಗುರು ಪಾಪಿಸಿಯರ್ ಈ ದೇವಾಲಯ ಜೀರ್ಣೋದ್ಧಾರ ಮಾಡಿಸಿದ ವಿವರಗಳಿವೆ. ಈ ಶಾಸನದ ವಿಶೇಷವೆಂದರೆ, ದೇವಾಲಯ ನಿರ್ವಹಣೆಗೆ ಸಂಗ್ರಹಿಸುತ್ತಿದ್ದ ಸುಂಕಗಳ ಪಟ್ಟಿಯಲ್ಲಿ 'ಅಜೀವಿಕ'ರ ಮೇಲಿನ ತೆರಿಗೆಯೂ ಸೇರಿದೆ.</p>.<p><strong>68ನೇ ಶಾಸನ</strong>: ಚೋಳರ ಕಾಲದಲ್ಲಿ ಈ ದೇವರನ್ನು 'ರಾಜೇಂದ್ರಚೋಳ ತೆಕ್ಕೀಶ್ವರಂ ಒಡೆಯ ನಾಯನಾರ್' ಎಂದು ಕರೆಯಲಾಗುತ್ತಿತ್ತು. ಸಿಂಗಯ್ಯನ ಮಗ ವಾಸವಯ್ಯ ಮತ್ತು ಆತನ ಮಗ ದೇವಾಲಯಕ್ಕೆ ಕೊಡುಗೆ ನೀಡಿದ ವಿವರಗಳಿವೆ.</p>.<p><strong>69ನೇ ಶಾಸನ (ಕ್ರಿ.ಶ. 1080):</strong> ಈ ಶಾಸನದ ಪ್ರಕಾರ, ಗುಡಿಹಳ್ಳಿಯು 'ವಿಜಯರಾಜೇಂದ್ರಮಂಡಲದ ಕಳವಾರ ನಾಡಿ'ಗೆ ಸೇರಿತ್ತು ಎಂಬ ಮಾಹಿತಿ ಲಭಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ:</strong> ಅವಿಭಜಿತ ಕೋಲಾರ ಜಿಲ್ಲೆ ಪುರಾತನ ದೇವಾಲಯಗಳಲ್ಲಿ ತಾಲ್ಲೂಕಿನ ಗುಡಿಹಳ್ಳಿ ಸೋಮೇಶ್ವರ ದೇವಾಲಯವೂ ಒಂದು. ಶಿವಲಿಂಗದ ಶೈಲಿಯನ್ನು ಗಮನಿಸಿದರೆ ಈ ದೇವಾಲಯ ಗಂಗರ ಕಾಲದಲ್ಲಿ ನಿರ್ಮಾಣವಾಗಿರಬಹುದು. ಆದರೆ, ಶಾಸನಗಳ ಆಧಾರದ ಪ್ರಕಾರ ಚೋಳರ ಕಾಲದಲ್ಲಿ ಈ ದೇವಾಲಯ ಜೀರ್ಣೋದ್ಧಾರವಾಗಿರುವ ದಾಖಲೆಗಳಿವೆ ಎನ್ನುತ್ತಾರೆ ಶಾಸನ ತಜ್ಞರು.</p>.<p>ದೇವಾಲಯದ ಆವರಣದಲ್ಲಿ ಒಟ್ಟು ನಾಲ್ಕು ಶಾಸನಗಳಿವೆ. ಇವು ಎಪಿಗ್ರಾಫಿಯಾ ಕರ್ನಾಟಕದ ಹತ್ತನೇ ಸಂಪುಟದಲ್ಲಿ ಪ್ರಕಟವಾಗಿವೆ. ಇವುಗಳಲ್ಲಿ ಮೂರು ಕುಲೋತುಂಗ ಚೋಳನ ಕಾಲದವು. ಒಂದು ಕರ್ನಾಟಕ ಸಾಮ್ರಾಜ್ಯದ ಆರಂಭ ಕಾಲದ್ದು.</p>.<p><strong>66ನೇ ಶಾಸನ (ಕ್ರಿ.ಶ. 1080):</strong> ರಾಜಮಾಣಿಕ್ಕವೇಲನ್ ಎಂಬ ವೀರ ಸ್ತ್ರೀಯರ ಮಾನ ಕಾಪಾಡಲು ಹೋಗಿ ಹುತಾತ್ಮನಾದ ಸಂದರ್ಭದ 'ಪೆಣ್ಬಯಿಲ್' ಶಾಸನ ಇದು. ಇದನ್ನು ಆತನ ಮಗ ಇರುಗನ್ ರಾಜಮಾಣಿಕ್ಕವೇಲನ್ ಹಾಕಿಸಿದ.</p>.<p><strong>67ನೇ ಶಾಸನ (ಕ್ರಿ.ಶ. 1346)</strong>: ದೇವಾಲಯದ ಅಧಿಷ್ಠಾನದ ಮೇಲಿರುವ ಈ ಶಾಸನದ ಪ್ರಕಾರ, ಗುಡಿಹಳ್ಳಿ ಅಂಬಡಕ್ಕಿ ನಾಡಿನ ಭಾಗವಾಗಿತ್ತು. ಆಗ ಅಂಕಯ್ಯನಾಯಕ ಆಡಳಿತಗಾರನಾಗಿದ್ದ. ಅಂಬಡಕ್ಕಿ ನಾಡಿನ ಧರ್ಮಗುರು ಪಾಪಿಸಿಯರ್ ಈ ದೇವಾಲಯ ಜೀರ್ಣೋದ್ಧಾರ ಮಾಡಿಸಿದ ವಿವರಗಳಿವೆ. ಈ ಶಾಸನದ ವಿಶೇಷವೆಂದರೆ, ದೇವಾಲಯ ನಿರ್ವಹಣೆಗೆ ಸಂಗ್ರಹಿಸುತ್ತಿದ್ದ ಸುಂಕಗಳ ಪಟ್ಟಿಯಲ್ಲಿ 'ಅಜೀವಿಕ'ರ ಮೇಲಿನ ತೆರಿಗೆಯೂ ಸೇರಿದೆ.</p>.<p><strong>68ನೇ ಶಾಸನ</strong>: ಚೋಳರ ಕಾಲದಲ್ಲಿ ಈ ದೇವರನ್ನು 'ರಾಜೇಂದ್ರಚೋಳ ತೆಕ್ಕೀಶ್ವರಂ ಒಡೆಯ ನಾಯನಾರ್' ಎಂದು ಕರೆಯಲಾಗುತ್ತಿತ್ತು. ಸಿಂಗಯ್ಯನ ಮಗ ವಾಸವಯ್ಯ ಮತ್ತು ಆತನ ಮಗ ದೇವಾಲಯಕ್ಕೆ ಕೊಡುಗೆ ನೀಡಿದ ವಿವರಗಳಿವೆ.</p>.<p><strong>69ನೇ ಶಾಸನ (ಕ್ರಿ.ಶ. 1080):</strong> ಈ ಶಾಸನದ ಪ್ರಕಾರ, ಗುಡಿಹಳ್ಳಿಯು 'ವಿಜಯರಾಜೇಂದ್ರಮಂಡಲದ ಕಳವಾರ ನಾಡಿ'ಗೆ ಸೇರಿತ್ತು ಎಂಬ ಮಾಹಿತಿ ಲಭಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>