‘ಸೋಲಾರ್ ಘಟಕಕ್ಕೆ ಜಮೀನು ನೀಡಿದ ರೈತರು ನಾವು. ಸ್ವಯಂಪ್ರೇರಣೆಯಿಂದ ಜಮೀನನ್ನು ಮಾರಾಟ ಮಾಡಿದ್ದೇವೆ ಹಾಗೂ ಕೆಲ ರೈತರು ಕ್ರಯ ಒಪ್ಪಂದ ಮಾಡಿಕೊಂಡಿದ್ದೇವೆ ಇದಕ್ಕೆ ನಮ್ಮ ತಕರಾರು ಏನೂ ಇಲ್ಲ. ನಾವು ಜಮೀನು ಮಾರಾಟ ಮಾಡಿ ಇತರೆ ಕಡೆ ಜಮೀನು ಖರೀದಿಸಿದ್ದೇವೆ’ ಎಂದು ಸಭೆಯಲ್ಲಿ ಸೋಲಾರ್ ಘಟಕಕ್ಕೆ ಜಮೀನು ನೀಡಿದ ರೈತರು ಹಾಗೂ ಮುಖಂಡರಾದ ಮಲ್ಲಸಂದ್ರ ಗಂಗಾಧರ, ಬಿ.ಕೆ.ನರಸಿಂಹಮೂರ್ತಿ, ಕಲ್ಲಿನಾಯಕನಹಳ್ಳಿ ಮುನಿಯಪ್ಪ, ಸೇರಿದಂತೆ ಇನ್ನಿತರ ದಲಿತ ಮುಖಂಡರು ತಿಳಿಸಿದ್ದಾರೆ.