‘ಕಾಂಗ್ರೆಸ್ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಸುಧಾಕರ್ ಅವರು ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಜನರ, ಪಕ್ಷದ ಸ್ವಾಭಿಮಾನವನ್ನು ಕೋಟಿ, ಕೋಟಿಗೆ ಮಾರಿದ್ದಾರೆ. ಬಿಜೆಪಿಯವರು ಒಡ್ಡಿದ ಹಣ, ಅಧಿಕಾರದ ಆಸೆಗೆ ಪಕ್ಷಾಂತರ ಮಾಡಿ ಇದೀಗ ನಾಲಿಗೆ ಬದಲಾಯಿಸಿ ಬಿಜೆಪಿ ಹೊಗಳುವ ಕೆಲಸ ಮಾಡುತ್ತಿದ್ದಾರೆ. ಇಂತಹವರು ಪುನಃ ಗೆಲ್ಲಿಸಿದರೆ ಮತ್ತೊಂದು ಚುನಾವಣೆ ಹತ್ತಿರದಲ್ಲಿಯೇ ಬಂದರೂ ಅಚ್ಚರಿ ಇಲ್ಲ. ರಾಜಕಾರಣದಲ್ಲಿ ಮೋಸ ಮಾಡುವವರು ಉಳಿಯಬಾರದು’ ಎಂದರು.