'ಯುವಜನರು ಮಾನಸಿಕವಾಗಿ ಒತ್ತಡಕ್ಕೆ ಸಿಲುಕುವುದರಿಂದ ತಮ್ಮ ಜೀವನದಲ್ಲಿ ಪರಿಪೂರ್ಣತೆಯನ್ನು ಹೊಂದಲು ಸಾಧ್ಯವಿಲ್ಲ. ಯುವಸ್ಪಂದನ ಕೇಂದ್ರದಲ್ಲಿ, ಸಂಬಂಧಗಳು, ಸುರಕ್ಷತೆ, ಶಿಕ್ಷಣ, ಆರೋಗ್ಯ ಮತ್ತು ಜೀವನಶೈಲಿ, ಭಾವನೆಗಳ ನಿರ್ವಹಣೆ ಕುರಿತ ವಿಷಯಗಳ ಬಗ್ಗೆ ಉಚಿತವಾಗಿ ಮಾರ್ಗದರ್ಶನ ಸಿಗುತ್ತದೆ. ಏನೇ ಕಷ್ಟ ಬಂದರೂ ಯುವಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿ ಉಪಯೋಗ ಪಡೆಯಬಹುದು’ ಎಂದರು.