ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಗೋಡೆ ಕೊರೆದು ಮದ್ಯದಂಗಡಿ ಕಳ್ಳತನ

ಲಾಕ್‌ಡೌನ್‌ನಿಂದ ಮದ್ಯ ಸಿಗದೆ ಕಂಗಾಲಾದ ಮದ್ಯ ವ್ಯಸನಿಗಳ ಕೃತ್ಯದ ಶಂಕೆ
Last Updated 15 ಏಪ್ರಿಲ್ 2020, 13:49 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಬಿ.ಬಿ.ರಸ್ತೆಯಲ್ಲಿರುವ ಬಾಲಾಜಿ ವೈನ್‌ಶಾಪ್‌ ಗೊಡೆ ಕೊರೆದು ಮಂಗಳವಾರ ರಾತ್ರಿ ಖದೀಮರು ಮದ್ಯ ಕದ್ದು ಪರಾರಿಯಾಗಿದ್ದಾರೆ.

ಬುಧವಾರ ಬೆಳಿಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನವಾದ ವೈನ್‌ಶಾಪ್‌ ಕೋಲಾರದ ರಮೇಶ್‌ ಎಂಬುವರಿಗೆ ಸೇರಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು.

ಕಳ್ಳರು ವೈನ್‌ಶಾಪ್‌ನಿಂದ ಸುಮಾರು ₹9,000 ಮೌಲ್ಯದ ಮೂರು ಮದ್ಯದ ಟೆಟ್ರಾ ಪಾಕೇಟ್‌ಗಳ ಬಾಕ್ಸ್‌ಗಳನ್ನು ಹೊತ್ತೊಯ್ದಿದ್ದಾರೆ. ಕೆಲ ಬಾಕ್ಸ್‌ಗಳನ್ನು ಸಾಗಿಸಲು ಹೊರಗಡೆ ತಂದಿಟ್ಟು ಹಾಗೇ ಬಿಟ್ಟು ಹೋಗಿರುವುದು ಪರಿಶೀಲನೆ ವೇಳೆ ತಿಳಿದು ಬಂದಿದೆ.

ಲಾಕ್‌ಡೌನ್‌ನಿಂದ ಮದ್ಯ ಸಿಗದೆ ಕಂಗಾಲಾದ ಮದ್ಯ ವ್ಯಸನಿಗಳು ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT