ಮಿಟ್ಟೇಮರಿ ಹೊರ ಠಾಣೆ ಬಳಿಯ ದಿನಸಿ ಅಂಗಡಿಯಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆಗೆ ಕಡಿವಾಣ ಹಾಕುವಲ್ಲಿ ಈ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರು ಎನ್ನಲಾಗಿದೆ. ಈ ವಿಷಯ ಅರಿತ ಡಿವೈಎಸ್ಪಿ ರವಿಶಂಕರ್ ಅವರು ಇತ್ತೀಚೆಗೆ ಖಚಿತ ಮಾಹಿತಿ ಮೆರೆಗೆ ದಿನಸಿ ಅಂಗಡಿ ಮೇಲೆ ದಾಳಿ ನಡೆಸಿ, ಮಟ್ಕಾ ಚೀಟಿಗಳು, ₹21 ಸಾವಿರ ನಗದು, ಮೊಬೈಲ್, ಸ್ಕ್ಯಾನರ್ ಜಪ್ತಿ ಮಾಡುವ ಜತೆಗೆ ಮಟ್ಕಾ ದಂಧೆ ನಡೆಸುತ್ತಿದ್ದ ಲಕ್ಷ್ಮೀ ಮತ್ತು ಆಂಜನಮ್ಮ ಎಂಬವರನ್ನು ಬಂಧಿಸಿದ್ದರು.