<p><strong>ಚಿಂತಾಮಣಿ:</strong> ಟೊಮೆಟೊ ಬೆಳೆಗೆ ರಸಾವರಿ ಮೂಲಕ ಪೋಷಕಾಂಶ ಒದಗಿಸಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಗಾಯಿತ್ರಿ ರೈತರಿಗೆ ಸಲಹೆ ನೀಡಿದರು.</p>.<p>ತಾಲ್ಲೂಕಿನ ಬ್ರಾಹ್ಮಣರದಿನ್ನೆ ಗ್ರಾಮದ ರೈತ ಆನಂದ್ ಅವರ ತೋಟದಲ್ಲಿ ಹಮ್ಮಿಕೊಂಡಿದ್ದ ಟೊಮೆಟೊ ಸಮಗ್ರ ಬೆಳೆ ನಿರ್ವಹಣೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಆಧುನಿಕ ಸಮಾಜದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಸಿಗುತ್ತದೆ. ತರಕಾರಿ ಸ್ಪೆಷಲ್ ಲಘು ಪೋಷಕಾಂಶ ಮಿಶ್ರಣವನ್ನು ಟೊಮೆಟೊ ಹೂ ಮತ್ತು ಕಾಯಿ ಇರುವಾಗ ಎಲೆಗಳ ಮೇಲೆ ಸಿಂಪಡಣೆ ಮಾಡುವುದರಿಂದ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದು ಎಂದರು.</p>.<p>ಸೂಕ್ಷ್ಮಜೀವಿ ಮಿಶ್ರಣ ಅರ್ಕ ಮೈಕ್ರೋಬಿಯಲ್ ಕನ್ಸಾರ್ಷಿಯಂ ಬಳಕೆಯಿಂದ ಸೊರಗು ರೋಗವನ್ನು ತಡೆಗಟ್ಟಬಹುದು. ಹಳದಿ ಅಂಟುಪಟ್ಟಿ ಮತ್ತು ವೋಟಾ-ಟೀ ಟ್ರಾಪ್ ಅಳವಡಿಕೆ ಮಾಡಿದರೆ ಕೀಟಗಳ ಬಾಧೆಯಿಂದ ಮುಕ್ತವಾಗಬಹುದು ಎಂದು ರೈತರಿಗೆ ಕ್ಷೇತ್ರೋತ್ಸವದ ಮೂಲಕ ಮಾಹಿತಿ ನೀಡಿದರು.</p>.<p>ಗೃಹ ವಿಜ್ಞಾನಿ ಎ. ಭಾವನಾ ಮಾತನಾಡಿ, ಟೊಮೆಟೊಗೆ ಬೆಲೆ ಸಿಗದಿರುವ ಸಂದರ್ಭಗಳಲ್ಲಿ ಮನೆಯ ಬಳಿ ಸ್ವಚ್ಛತೆ ಇರುವ ಸ್ಥಳದಲ್ಲಿ ಹಣ್ಣನ್ನು ಚಕ್ರಾಕಾರದಲ್ಲಿ ಕತ್ತರಿಸಿ 32 ಡಿಗ್ರಿ ಸೆಲ್ಸಿಯಸ್ ಬಿಸಿಲಿನಲ್ಲಿ 2 ದಿನ ಒಣಗಿಸಿ ಪುಡಿ ಮಾಡಬೇಕು ಅಥವಾ ಹಾಗೆಯೇ ಶೇಖರಿಸಿ ಇಡಬೇಕು. ಅಡುಗೆಗೆ ಟೊಮೆಟೊ ಬದಲಿಗೆ ಒಣಗಿಸಿದ ಹಣ್ಣನ್ನು ಬಳಸಬಹುದು ಎಂದು ತಿಳಿಸಿದರು.</p>.<p>ಬೆಲೆ ಇಲ್ಲದ ಸಮಯದಲ್ಲಿ ಹಣ್ಣನ್ನು ರಸ್ತೆಗೆ ಸುರಿಯದೆ ಸಂಸ್ಕರಣೆ ಮಾಡಿ ಸದುಪಯೋಗ ಪಡಿಸಿಕೊಂಡರೆ ಆರ್ಥಿಕವಾಗಿ ಸದೃಢರಾಗಬಹುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ:</strong> ಟೊಮೆಟೊ ಬೆಳೆಗೆ ರಸಾವರಿ ಮೂಲಕ ಪೋಷಕಾಂಶ ಒದಗಿಸಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಗಾಯಿತ್ರಿ ರೈತರಿಗೆ ಸಲಹೆ ನೀಡಿದರು.</p>.<p>ತಾಲ್ಲೂಕಿನ ಬ್ರಾಹ್ಮಣರದಿನ್ನೆ ಗ್ರಾಮದ ರೈತ ಆನಂದ್ ಅವರ ತೋಟದಲ್ಲಿ ಹಮ್ಮಿಕೊಂಡಿದ್ದ ಟೊಮೆಟೊ ಸಮಗ್ರ ಬೆಳೆ ನಿರ್ವಹಣೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಆಧುನಿಕ ಸಮಾಜದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಸಿಗುತ್ತದೆ. ತರಕಾರಿ ಸ್ಪೆಷಲ್ ಲಘು ಪೋಷಕಾಂಶ ಮಿಶ್ರಣವನ್ನು ಟೊಮೆಟೊ ಹೂ ಮತ್ತು ಕಾಯಿ ಇರುವಾಗ ಎಲೆಗಳ ಮೇಲೆ ಸಿಂಪಡಣೆ ಮಾಡುವುದರಿಂದ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದು ಎಂದರು.</p>.<p>ಸೂಕ್ಷ್ಮಜೀವಿ ಮಿಶ್ರಣ ಅರ್ಕ ಮೈಕ್ರೋಬಿಯಲ್ ಕನ್ಸಾರ್ಷಿಯಂ ಬಳಕೆಯಿಂದ ಸೊರಗು ರೋಗವನ್ನು ತಡೆಗಟ್ಟಬಹುದು. ಹಳದಿ ಅಂಟುಪಟ್ಟಿ ಮತ್ತು ವೋಟಾ-ಟೀ ಟ್ರಾಪ್ ಅಳವಡಿಕೆ ಮಾಡಿದರೆ ಕೀಟಗಳ ಬಾಧೆಯಿಂದ ಮುಕ್ತವಾಗಬಹುದು ಎಂದು ರೈತರಿಗೆ ಕ್ಷೇತ್ರೋತ್ಸವದ ಮೂಲಕ ಮಾಹಿತಿ ನೀಡಿದರು.</p>.<p>ಗೃಹ ವಿಜ್ಞಾನಿ ಎ. ಭಾವನಾ ಮಾತನಾಡಿ, ಟೊಮೆಟೊಗೆ ಬೆಲೆ ಸಿಗದಿರುವ ಸಂದರ್ಭಗಳಲ್ಲಿ ಮನೆಯ ಬಳಿ ಸ್ವಚ್ಛತೆ ಇರುವ ಸ್ಥಳದಲ್ಲಿ ಹಣ್ಣನ್ನು ಚಕ್ರಾಕಾರದಲ್ಲಿ ಕತ್ತರಿಸಿ 32 ಡಿಗ್ರಿ ಸೆಲ್ಸಿಯಸ್ ಬಿಸಿಲಿನಲ್ಲಿ 2 ದಿನ ಒಣಗಿಸಿ ಪುಡಿ ಮಾಡಬೇಕು ಅಥವಾ ಹಾಗೆಯೇ ಶೇಖರಿಸಿ ಇಡಬೇಕು. ಅಡುಗೆಗೆ ಟೊಮೆಟೊ ಬದಲಿಗೆ ಒಣಗಿಸಿದ ಹಣ್ಣನ್ನು ಬಳಸಬಹುದು ಎಂದು ತಿಳಿಸಿದರು.</p>.<p>ಬೆಲೆ ಇಲ್ಲದ ಸಮಯದಲ್ಲಿ ಹಣ್ಣನ್ನು ರಸ್ತೆಗೆ ಸುರಿಯದೆ ಸಂಸ್ಕರಣೆ ಮಾಡಿ ಸದುಪಯೋಗ ಪಡಿಸಿಕೊಂಡರೆ ಆರ್ಥಿಕವಾಗಿ ಸದೃಢರಾಗಬಹುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>