<p><strong>ಚೇಳೂರು</strong>: ತಾಲ್ಲೂಕಿನ ಚಾಕವೇಲು ಸಮೀಪದ ದಿಗವಪ್ಯಾಯಲಪಲ್ಲಿಯಲ್ಲಿ ಗ್ರಾಮದ ಗದ್ದೆಯಲ್ಲಿ ಟ್ರ್ಯಾಕ್ಟರ್ ಕೆಳಗೆ ಸಿಕ್ಕಿಕೊಂಡು ಮಂಗಳವಾರ ರೈತ ಮೃತಪಟ್ಟಿದ್ದಾರೆ.</p>.<p>ರೈತ ಶಂಕರರೆಡ್ಡಿ (48) ಮೃತಪಟ್ಟ ರೈತ.</p>.<p>ಭತ್ತ ಬೆಳೆಯುವ ಸಲುವಾಗಿ ಜಮೀನು ಸಮತಟ್ಟು ಮಾಡಿ ನೀರು ಹಾಕಿ ಟ್ರ್ಯಾಕ್ಟರ್ನಿಂದ ಉಳುಮೆ ಮಾಡುತ್ತಿದ್ದಾಗ ಕೆಸರಿನಲ್ಲಿ ಟ್ರ್ಯಾಕ್ಟರ್ ಸಿಕ್ಕಿ ಹಾಕಿಕೊಂಡಿದೆ. ಇದನ್ನು ಹೊರ ತೆಗೆಯುವಾಗ ಟ್ರ್ಯಾಕ್ಟರ್ ತಿರುವಿ ರೈತನ ಮೇಲೆ ಬಿದ್ದ ಪರಿಣಾಮ ರೈತ ಕೆಸರಿನಲ್ಲೇ ಹೂತು ಹೋಗಿದ್ದಾರೆ.</p>.<p>ಇದನ್ನು ನೋಡಿದ ಮಕ್ಕಳು ಕೂಗಿಕೊಂಡಾಗ ಅಕ್ಕಪಕ್ಕದ ರೈತರು ಓಡಿಬಂದು ಹೊರ ತೆಗೆಯಲು ಯಂತ್ರ ತರಿಸಿದ್ದಾರೆ. ಅಷ್ಟೊತ್ತಿಗಾಗಲೇ ರೈತ ಮೃತಪಟ್ಟಿದ್ದಾರೆ.</p>.<p>ಚೇಳೂರು ತಹಶೀಲ್ದಾರ್ ಎ.ವಿ.ಶ್ರೀನಿವಾಸುಲುನಾಯುಡು, ಪ್ರಭಾರಿ ಉಪ-ತಹಶೀಲ್ದಾರ್ ಎಂ.ಎನ್.ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೇಳೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. </p>.<p>ಪರಿಹಾರ ನೀಡಲು ಒತ್ತಾಯ: ಜಮೀನು ಹದಮಾಡಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡ ರೈತ ಅಕಾಲಿಕ ದುರ್ಮರಣವಾಗಿದ್ದು ಆ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಸ್ಥಳೀಯ ರೈತರು ಗ್ರಾಮಸ್ಥರು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೇಳೂರು</strong>: ತಾಲ್ಲೂಕಿನ ಚಾಕವೇಲು ಸಮೀಪದ ದಿಗವಪ್ಯಾಯಲಪಲ್ಲಿಯಲ್ಲಿ ಗ್ರಾಮದ ಗದ್ದೆಯಲ್ಲಿ ಟ್ರ್ಯಾಕ್ಟರ್ ಕೆಳಗೆ ಸಿಕ್ಕಿಕೊಂಡು ಮಂಗಳವಾರ ರೈತ ಮೃತಪಟ್ಟಿದ್ದಾರೆ.</p>.<p>ರೈತ ಶಂಕರರೆಡ್ಡಿ (48) ಮೃತಪಟ್ಟ ರೈತ.</p>.<p>ಭತ್ತ ಬೆಳೆಯುವ ಸಲುವಾಗಿ ಜಮೀನು ಸಮತಟ್ಟು ಮಾಡಿ ನೀರು ಹಾಕಿ ಟ್ರ್ಯಾಕ್ಟರ್ನಿಂದ ಉಳುಮೆ ಮಾಡುತ್ತಿದ್ದಾಗ ಕೆಸರಿನಲ್ಲಿ ಟ್ರ್ಯಾಕ್ಟರ್ ಸಿಕ್ಕಿ ಹಾಕಿಕೊಂಡಿದೆ. ಇದನ್ನು ಹೊರ ತೆಗೆಯುವಾಗ ಟ್ರ್ಯಾಕ್ಟರ್ ತಿರುವಿ ರೈತನ ಮೇಲೆ ಬಿದ್ದ ಪರಿಣಾಮ ರೈತ ಕೆಸರಿನಲ್ಲೇ ಹೂತು ಹೋಗಿದ್ದಾರೆ.</p>.<p>ಇದನ್ನು ನೋಡಿದ ಮಕ್ಕಳು ಕೂಗಿಕೊಂಡಾಗ ಅಕ್ಕಪಕ್ಕದ ರೈತರು ಓಡಿಬಂದು ಹೊರ ತೆಗೆಯಲು ಯಂತ್ರ ತರಿಸಿದ್ದಾರೆ. ಅಷ್ಟೊತ್ತಿಗಾಗಲೇ ರೈತ ಮೃತಪಟ್ಟಿದ್ದಾರೆ.</p>.<p>ಚೇಳೂರು ತಹಶೀಲ್ದಾರ್ ಎ.ವಿ.ಶ್ರೀನಿವಾಸುಲುನಾಯುಡು, ಪ್ರಭಾರಿ ಉಪ-ತಹಶೀಲ್ದಾರ್ ಎಂ.ಎನ್.ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೇಳೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. </p>.<p>ಪರಿಹಾರ ನೀಡಲು ಒತ್ತಾಯ: ಜಮೀನು ಹದಮಾಡಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡ ರೈತ ಅಕಾಲಿಕ ದುರ್ಮರಣವಾಗಿದ್ದು ಆ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಸ್ಥಳೀಯ ರೈತರು ಗ್ರಾಮಸ್ಥರು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>