ನಿತ್ಯ ಬೆಳಿಗ್ಗೆ ಚಿಕ್ಕಬಳ್ಳಾಪುರದ ಎಂ.ಜಿ.ರಸ್ತೆಯ ಅಂಬಾಭವಾನಿ ಹೋಟೆಲ್ ಬಳಿಯ ವೃತ್ತದ ಬಳಿ ನೋಡಿದರೆ ಅರೆ, ಇದೇನಿದು ಇಷ್ಟೊಂದು ಮಂದಿ ಹಳ್ಳಿಯ ಜನರು! ಏಕೆ ನಿಂತಿದ್ದಾರೆ ಎನ್ನುವ ಪ್ರಶ್ನೆ ಹೊಸದಾಗಿ ನಗರಕ್ಕೆ ಬಂದವರಿಗೆ, ದಾರಿ ಹೋಕರಿಗೆ ಎದುರಾಗುತ್ತದೆ. ಮಾಸಿದ ಅಂಗಿ, ಪಂಚೆ, ಪ್ಯಾಂಟ್ಗಳನ್ನು ತೊಟ್ಟ ಇಷ್ಟೊಂದು ಜನರು ಏಕೆ ಇಲ್ಲಿದ್ದಾರೆ ಎನಿಸುತ್ತದೆ. ಇವರನ್ನು ಮಾತಿಗೆ ಎಳೆದರೆ ತಿಳಿಯುತ್ತದೆ, ಇವರೆಲ್ಲ ಬಗೆ ಬಗೆಯ ಕೌಶಲಗಳನ್ನು ಬಲ್ಲ ಕಾರ್ಮಿಕರು ಎನ್ನುವುದು.