ಚಿಕ್ಕಬಳ್ಳಾಪುರ: ಬಂಗಾರದ ಮಳಿಗೆಯ ಡಿಜಿಟಲ್ ತೂಕದ ಯಂತ್ರದ ಪರವಾನಗಿ ನವೀಕರಿಸಲು ಮಳಿಗೆ ಮಾಲೀಕನಿಂದ ಮೆಕ್ಯಾನಿಕ್ ಅಶ್ವತ್ಥಪ್ಪ ಎಂಬುವರ ಮೂಲಕ ₹ 2,000 ಲಂಚ ಪಡೆದ ತೂಕ ಮತ್ತು ಅಳತೆ ಮಾಪನ ಇಲಾಖೆ ಇನ್ಸ್ಪೆಕ್ಟರ್ ಎಂ.ಗಿರಿಜೇಶ್ ಮತ್ತು ಅಶ್ವತ್ಥಪ್ಪ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.